ದಾವಣಗೆರೆ: ವಿದ್ಯಾರ್ಥಿಗಳಿಗೆ ಸ್ವಯಂ ಅರಿವಿನ ಜ್ಞಾನ ಮೂಡಿಸಲು, ಅವರಿಗೆ ಪ್ರೋತ್ಸಾಹ, ಕೆಲವು ಭಾವನೆಗಳಿಗೆ ಮನ್ನಣೆ ನೀಡಬೇಕು ಸ್ವರ್ಣಗೌರಿ ಗೋವಿಂದರಾಜು ತಿಳಿಸಿದರು.
ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಸ್ವಯಂ ಅರಿವು, ಭಾವನೆಗಳ ನಿಯಂತ್ರಣ ಮತ್ತು ಪರಿಣಾಮಕಾರಿ ಸಂಬಂಧ’ ವಿಷಯ ಕುರಿತು ಅವರು ಮಾತನಾಡಿದರು.
ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ವಿ. ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ಬೋಧಕ, ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಟಿ. ಶ್ರುತಿ ಸ್ವಾಗತಿಸಿದರು. ಕೆ.ವಿ. ದೀಪಾ ವಂದಿಸಿದರು. ಎ.ಎನ್. ಕೊಟ್ರೇಶ್ ಕಾರ್ಯಕ್ರಮ ನಿರೂಪಿಸಿದರು.
ಇಂದು ‘ಕಂದಾಯ ದಿನ’
ನಗರದ ಗುಂಡಿಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಫೆ. 16ರಂದು ಸಂಜೆ 5ಕ್ಕೆ ಕಂದಾಯ ಇಲಾಖೆ ದಿನಾಚರಣೆ ಆಯೋಜಿಸಲಾಗಿದೆ.ಸಚಿವರಾದ ಜಿ. ಕರುಣಾಕರ ರೆಡ್ಡಿ ಸಮಾರಂಭ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಭಾಗವಹಿಸಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.