ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧಕ್ಕೆ ನೇರ ಬಸ್‌ ಸೌಲಭ್ಯ ಕಲ್ಪಿಸಿ

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಎನ್‌.ಆರ್‌. ಕಾಲೋನಿ, ಹೊಸಕೆರೆಹಳ್ಳಿ, ಶ್ರೀನಗರದಿಂದ ವಿಧಾನಸೌಧ, ಎಂ.ಎಸ್‌. ಬಿಲ್ಡಿಂಗ್‌, ಹೈಕೋರ್ಟ್‌ ಮತ್ತು ಇತರೆ ಕಚೇರಿಗಳಿಗೆ ನೇರ ಬಸ್‌ ಸೌಲಭ್ಯವಿಲ್ಲ. ಆ ಕಡೆ ಹೋಗುವ ಒಂದೆರಡು ಬಿಎಂಟಿಸಿ ಬಸ್ಸುಗಳು ಮಹಾರಾಣಿ ಕಾಲೇಜು ಹತ್ತಿರ ಇಳಿಸುತ್ತವೆ. ಈ ಜಾಗದಿಂದ ಮೇಲ್ಕಂಡ ಸ್ಥಳಗಳನ್ನು ತಲುಪಲು 1–2 ಕಿ.ಮೀ. ಆಗುತ್ತದೆ.

ಅಷ್ಟು ದೂರ ನಡೆಯಬೇಕು ಇಲ್ಲವೇ ಆಟೊರಿಕ್ಷಾದ ಮೊರೆ ಹೋಗಬೇಕು. ಆದ್ದರಿಂದ ಬಿಎಂಟಿಸಿಯವರು ಮೇಲ್ಕಂಡ ಸ್ಥಳಗಳಿಂದ ಶಿವಾಜಿನಗರಕ್ಕೆ ಮಾರ್ಕೆಟ್‌, ಚಾಮರಾಜಪೇಟೆ, ಕೆ.ಆರ್‌. ಸರ್ಕಲ್‌ ಮುಖಾಂತರ ಬಸ್ಸುಗಳು ಸಂಚರಿಸಿದರೆ ಸಾರ್ವಜನಿಕರಿಗೆ ಬಹಳ ಉಪಯೋಗವಾಗುತ್ತದೆ. ಹೀಗಾಗಿ ಈ ಮಾರ್ಗಗಳಲ್ಲಿ ಶೀಘ್ರ ಬಸ್‌ ಸೌಕರ್ಯ ಕಲ್ಪಿಸಲಿ.
–ಬಿ.ಎಸ್‌.ಎಂ. ಕುಮಾರ್, ಶ್ರೀನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT