ಸುವರ್ಣಸೌಧ (ಬೆಳಗಾವಿ): ವಿಫಲ ಬಾವಿಗಳ ಬಾಬ್ತು ರೈತರು ಪಡೆದ ಸಾಲವನ್ನು ಮನ್ನಾ ಮಾಡುವ ಯೋಜ ನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ವಿಧಾನ ಪರಿಷತ್ನಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವ ಎಚ್.ಎಸ್. ಮಹ ದೇವಪ್ರಸಾದ್, ‘ವಿಫಲ ಬಾವಿಗಳ ಸಾಲ ಮನ್ನಾ ಮಾಡುವ ಯೋಜನೆ ವಿಸ್ತರಿ ಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಕ್ಯಾಸ್ಕಾರ್ಡ್) ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾ ಭಿವೃದ್ಧಿ ಸಹಕಾರಿ (ಪಿಕಾರ್ಡ್) ಬ್ಯಾಂಕ್ಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದಾರೆ ಎಂದರು.
ವಿಫಲ ಬಾವಿಗಳನ್ನು ತೋಡಲು ರೈತರು ಪಡೆದಿರುವ ಸಾಲದ ಕುರಿತು ವಿವರವಾದ ವರದಿಗಳನ್ನು ಸಲ್ಲಿಸುವಂತೆ ಕ್ಯಾಸ್ಕಾರ್ಡ್ ಮತ್ತು ಪಿಕಾರ್ಡ್ ಬ್ಯಾಂಕ್ಗಳಿಗೆ ಸೂಚನೆ ನೀಡಿದ್ದಾರೆ’ ಎಂದು ಮಹದೇವಪ್ರಸಾದ್ ತಿಳಿಸಿದರು.