ವಿಜಯಪುರ: ಭಾರತೀಯ ಆಧ್ಯಾತ್ಮವನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಆಧ್ಯಾತ್ಮ ಚಿಂತಕ ಗಂಗಾಧರಯ್ಯ ತಿಳಿಸಿದರು.
ಸ್ವಾಮಿ ವಿವೇಕಾನಂದರ 150ನೇ ಜಯಂತಿ ಅಂಗವಾಗಿ ಇಲ್ಲಿನ ಪ್ರಗತಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ `ಯುವಶಕ್ತಿಗೆ ವಿವೇಕಾನಂದರ ಅಂತಃ ಸ್ಫೂರ್ತಿ ನಡೆ-ನುಡಿ~ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.
ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವಕರು ವಿವೇಕಾನಂದರ ತತ್ವ ಮತ್ತು ಮೌಲ್ಯಗಳನ್ನು ಅನುಸರಿಸಬೇಕು ಎಂದರು.
ಪ್ರಾಂಶುಪಾಲ ಎನ್.ನಾಗರಾಜ್, ಪ್ರತಿಯೊಬ್ಬರ ಚಟುವಟಿಕೆಗಳು ಸಾಮಾಜಿಕ ಆಶಯಗಳಿಗೆ ಪೂರಕವಾಗಿರಬೇಕು ಎಂದು ಹೇಳಿದರು.
ಉಪನ್ಯಾಸಕಿ ಸರಸ್ವತಿ, ಯುವ ಜನತೆ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಹೊರಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಗತಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಡಿ.ಎನ್.ಶೃತಿ (ಪ್ರಥಮ), ದೊಡ್ಡಬಳ್ಳಾಪುರ ಕೊಂಗಾಡಿಯಪ್ಪ ಕಾಲೇಜಿನ ಎನ್.ಬಿ.ಮಧು (ದ್ವಿತೀಯ), ದೊಡ್ಡಬಳ್ಳಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನರಸಿಂಹರಾಜ (ತೃತೀಯ) ಬಹುಮಾನ ಪಡೆದರು.
ಭಾಷಣ ಸ್ಪರ್ಧೆಯಲ್ಲಿ ಪ್ರಗತಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎನ್.ಅನುಪಮಾ (ಪ್ರಥಮ), ವೇಮ್ಗಲ್ನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಲೀಂ ಪಾಷಾ (ದ್ವಿತೀಯ), ಚಿಕ್ಕಬಳ್ಳಾಪುರ ಜ.ಚ.ನಿ ಪ್ರಥಮ ದರ್ಜೆ ಕಾಲೇಜಿನ ಸಿ.ಗಂಗಾಧರ್ (ತೃತೀಯ) ಬಹುಮಾನ ಪಡೆದರು.
ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಆರ್. ಶೆಟ್ಟಿನಾಯಕ್, ಸಾಹಿತಿ ಯಾ.ಚಿ.ದೊಡ್ಡಯ್ಯ, ಉಪನ್ಯಾಸಕರಾದ ಕೆಂಪೇಗೌಡ, ಶ್ರಿನಿವಾಸ ಮೂರ್ತಿ, ರೂಪ ಉದಯ್ ಇತರರು ಇದ್ದರು. ಉಪನ್ಯಾಸಕ ಮಚ್ಚೇಂದ್ರ ಸ್ವಾಗತಿಸಿ, ನಿರೂಪಿಸಿದರು. ಎಂ.ಮುನಿರತ್ನ ವಂದಿಸಿದರು.