ವಿಶಾಲ್ ಕವಟೇಕರ್ ಬೆಂಗಳೂರು ವಿವಿಯ ಕಲಾ ವಿದ್ಯಾರ್ಥಿ. `ವಿಶೇಷ~ (ಸ್ಪೆಷಲ್) ಎಂಬ ಅವರ ಇನ್ಸ್ಟಾಲೆಷನ್ಗಳ ಪ್ರದರ್ಶನ ಪ್ರಸ್ತುತ ನಗರದಲ್ಲಿ ನಡೆಯುತ್ತಿದೆ.
ವಿಶಾಲ್ ಹಳೆಯ ಪತ್ರಿಕೆಗಳನ್ನೇ ಬಳಸಿ ತಮ್ಮ ಅಮೂರ್ತ ಭಾವನೆಗಳಿಗೆ ಇಲ್ಲಿ ರೂಪ ನೀಡಿದ್ದಾರೆ. ದಿನಪತ್ರಿಕೆ, ರಟ್ಟಿನ ಡಬ್ಬ ಇತ್ಯಾದಿಗಳನ್ನು ಬಳಸಿಕೊಂಡು ಕಲಾಕೃತಿ ರಚಿಸಿದ್ದಾರೆ.
ಈ ಇನ್ಸ್ಟಾಲೆಷನ್ಗಳನ್ನು ಥಟ್ಟನೆ ನೋಡಿದಲ್ಲಿ ವ್ಯಕ್ತಿಯೊಬ್ಬ ತೆವಳಿಕೊಂಡು ಹೋದಂತೆ, ಮೂಲೆಯಲ್ಲಿ ನಿಂತಂತೆ ಭಾಸವಾಗುತ್ತದೆ. ಈ ಪ್ರದರ್ಶನ ಶುಕ್ರವಾರ ಮುಕ್ತಾಯ
ಸ್ಥಳ: ರಸ ಗ್ಯಾಲರಿ, 93, ಬಿ. ಮುನಿನಾಗಪ್ಪ ಆರ್ಕೆಡ್, 1ನೇ ಮಹಡಿ, 3ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಚಾಮರಾಜಪೇಟೆ.