ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸ ದ್ರೋಹ ಬಗೆದ ಮೋದಿ ಸರ್ಕಾರ

Last Updated 20 ಸೆಪ್ಟೆಂಬರ್ 2011, 5:30 IST
ಅಕ್ಷರ ಗಾತ್ರ

ಅಹಮದಾಬಾದ್ (ಐಎಎನ್ಎಸ್): ಗುಜರಾತ್ ಮುಖ್ಯಮಂತ್ರಿ  ನರೇಂದ್ರ ಮೋದಿ ಅವರು ಶನಿವಾರ ಆರಂಭಿಸಿದ್ದ 74 ಗಂಟೆಗಳ ~ಸದ್ಭಾವನಾ ಉಪವಾಸ~ಕ್ಕೆ ಪ್ರತಿಯಾಗಿ, ಅದರ ಬೆನ್ನ ಹಿಂದೆಯೇ ಕಾಂಗ್ರೆಸ್ ನಾಯಕರು ಮಾಜಿ ಕೇಂದ್ರ ಸಚಿವ ಶಂಕರಸಿಂಗ್ ವಘೇಲಾ ಅವರ ನೇತೃತ್ವದಲ್ಲಿ ಆರಂಭಿಸಿದ್ದ ತಮ್ಮ 74 ಗಂಟೆಗಳ ಉಪವಾಸವನ್ನು ಮಂಗಳವಾರ ಅಂತ್ಯಗೊಳಿಸಿದರು.

ಇಲ್ಲಿನ ಸಾಬರಮತಿ ಆಶ್ರಮದ ಎದುರಿಗಿನ ಕಟ್ಟೆಯಲ್ಲಿ ಇಬ್ಬರು ದಲಿತ ಬಾಲಕಿಯರು ಕೊಟ್ಟ ಲಿಂಬೆ ಹಣ್ಣಿನ ರಸ ಕುಡಿದ ವಘೇಲಾ ಅವರು, ಮಂಗಳವಾರ ಬೆಳಿಗ್ಗೆ ತಮ್ಮ ಉಪವಾಸಕ್ಕೆ ಮಂಗಳ ಹಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಘೇಲಾ ಅವರು, ತಮ್ಮ ಉಪವಾಸದಿಂದ ಗುಜರಾತಿನ ಜನಕ್ಕೆ ಮೋದಿ ಸರ್ಕಾರ ಬಗೆದಿರುವ ವಿಶ್ವಾಸದ್ರೋಹವನ್ನು ಎತ್ತಿ ತೋರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಸ್ವಚ್ಛವಾದ ಆಡಳಿತಕ್ಕಾಗಿ ಅವರ ನೆಲದಲ್ಲಿ ಅವರಿಂದ ಆಯ್ಕೆಯಾದವರು ಅವರಿಗಾಗಿ ಮಾಡಿದ್ದೇನು? ಎಂಬುದನ್ನು ತಮ್ಮ ಉಪವಾಸದ ಸಂದರ್ಭದಲ್ಲಿ ಗುಜರಾತಿನ ಜನರ ಗಮನ ಸೆಳೆಯಲಾಯಿತು ಎಂದೂ ಅವರು ಹೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಹಾಜರಿದ್ದ ಕಾಂಗ್ರೆಸ್ ಪಕ್ಷದ ರಾಜ್ಯದ ನಾಯಕರು ಸರ್ಕಾರದ ಈ ವಿಶ್ವಾಸ ದ್ರೋಹವನ್ನು ಜನತೆಗೆ ತಿಳಿಸುವುದರಿಂದ ವಿಮುಖರಾಗುವುದಿಲ್ಲ. ರಾಜ್ಯದಾದ್ಯಂತ ಈ ಸಂದೇಶ ಸಾರಲು ಸೆ. 29 ರಿಂದ ಕಚ್ಛ್ ನಿಂದ ಅಭಿಯಾನ ಆರಂಭಿಸುವುದಾಗಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT