ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಣ್ಣತೆ !

Last Updated 10 ಜುಲೈ 2013, 19:59 IST
ಅಕ್ಷರ ಗಾತ್ರ

ಎಂತೆಂಥಾ ಜನ ಇರುವರು ಸ್ವಾಮಿ ಇಲ್ಲಿ !
ಆಗರ್ಭ ಶ್ರೀಮಂತರೂ, ಆಗರ್ಭ (?) ಬಡವರೂ
ಕೋಟಿ - ಕೋಟಿಗಳ ವಿದೇಶದಲಿ ಕದ್ದಿಡುವವರು,
ಕೆಜಿ - ಕೆಜಿ ಚಿನ್ನವ ಮನೆಯೊಳಗವಿತಿಡುವವರು,
ಅವರು - ಇವರು,
ಎಲ್ಲರೂ ಭಾರತೀಯರು.


ರಾಜಕೀಯದಲಿ, ಸಿನೆಮಾದಲಿ ಮೆರೆದವರು,
ಲಂಚ ವೀರರು, ಕಳ್ಳದಂಧೆ ಕೋರರು,
ಹೂಡಿದರೆ, ಖಟ್ಲೆಯನು ಅವರ ಮೇಲೆ,
ಒಡನೆಯೇ ಬರುವುದು ಅವರಿಗೆ ಕಾಯಿಲೆ,
ಆಂ! ಸರಿ ಹೋಗುವರಿವರು `ಬೇಲು' ದೊರಕಿದ ಕೂಡಲೆ;
ಇರುವೆವು ಸ್ವಾಮಿ, ನಾವು - ನೀವು ಇವರ ನಡುವಲ್ಲಿ,
ನಮ್ಮೀ ಬದುಕು ಸಾಗಿದೆ ತಿಂಗಳ ಸಂಬಳದಲ್ಲಿ,
ಕಷ್ಟ - ಕೋಟಲೆ, ತಾಪ - ತಲ್ಲಣಗಳೆಡೆಯಲ್ಲಿ,
ಹಾಲು - ಗ್ಯಾಸ್ - ಪೆಟ್ರೋಲು ದರ ಏರಿಕೆ ಬಿಸಿಯಲ್ಲಿ.
- ಎನ್. ಡಿ. ಕಾರಂತ, ಮೈಸೂರು .

ಸೂಚನೆ
`ಪ್ರಜಾವಾಣಿ' ಅಭಿಮತ ಪುಟದ ವಾಚಕರ ವಾಣಿ ಅಂಕಣಕ್ಕೆ ಬರೆಯುವ ಪತ್ರಗಳು 100 ಪದಗಳ ಮಿತಿಯಲ್ಲಿರಲಿ.
ವಿಳಾಸ:  ಸಂಪಾದಕರು, ಪ್ರಜಾವಾಣಿ, ವಾಚಕರ ವಾಣಿ ವಿಭಾಗ, 75, ಎಂ.ಜಿ.ರಸ್ತೆ, ಬೆಂಗಳೂರು-560 001

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT