ರಾಜಕೀಯದಲಿ, ಸಿನೆಮಾದಲಿ ಮೆರೆದವರು,
ಲಂಚ ವೀರರು, ಕಳ್ಳದಂಧೆ ಕೋರರು,
ಹೂಡಿದರೆ, ಖಟ್ಲೆಯನು ಅವರ ಮೇಲೆ,
ಒಡನೆಯೇ ಬರುವುದು ಅವರಿಗೆ ಕಾಯಿಲೆ,
ಆಂ! ಸರಿ ಹೋಗುವರಿವರು `ಬೇಲು' ದೊರಕಿದ ಕೂಡಲೆ;
ಇರುವೆವು ಸ್ವಾಮಿ, ನಾವು - ನೀವು ಇವರ ನಡುವಲ್ಲಿ,
ನಮ್ಮೀ ಬದುಕು ಸಾಗಿದೆ ತಿಂಗಳ ಸಂಬಳದಲ್ಲಿ,
ಕಷ್ಟ - ಕೋಟಲೆ, ತಾಪ - ತಲ್ಲಣಗಳೆಡೆಯಲ್ಲಿ,
ಹಾಲು - ಗ್ಯಾಸ್ - ಪೆಟ್ರೋಲು ದರ ಏರಿಕೆ ಬಿಸಿಯಲ್ಲಿ.
- ಎನ್. ಡಿ. ಕಾರಂತ, ಮೈಸೂರು .