ಶಿರಸಿ: ಒಂದೇ ಕುಟುಂಬದ ಆರು ಮಕ್ಕಳು ಸೇರಿದಂತೆ 15 ಜನರು ವಿಷಯುಕ್ತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿನ ಮಹಾಲಕ್ಷ್ಮೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರು ಮಕ್ಕಳ ಚೇತರಿಸಿಕೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.
ಮೂಲತಃ ಹಾನಗಲ್ ತಾಲ್ಲೂಕಿನ ಶಿಗ್ಗಾವಿ ಹಾಗೂ ಮುಂಡಗೋಡ ತಾಲ್ಲೂಕಿನ ಪಾಳಾ ಸಮೀಪ ಕಲಕೊಪ್ಪ ನದೀಂ ಸಲೀಂ ಸಾಬ್, ತಸ್ಮಿಯಾ, ಜಹೀರಖಾನ್, ಮಹಮ್ಮದ್ ಖಾಸಿಂ, ಸುಹೇಲ್ ರಜಾಕ್ ಹಾಗೂ ಅರ್ಪ್ಾ ಅಸ್ವಸ್ಥಗೊಂಡಿದ್ದ ಮಕ್ಕಳು.