ಅಮ್ಮಿನಭಾವಿ ಗ್ರಾ.ಪಂ. ಉಪಾಧ್ಯಕ್ಷ ಸುನೀಲ ಗುಡಿ, ಪ್ರಗತಿಪರ ಕೃಷಿಕ ಶಿವಪ್ಪಣ್ಣ ಕುಸುಗಲ್ಲ, ಮಡಿವಾಳಪ್ಪ ಅಮರಶೆಟ್ಟಿ, ಬಸವರಾಜ ಕೊಳ್ಳಿ, ಹುಲೆಪ್ಪ ಜೀವಾಪೂರ, ಚಂಬಣ್ಣ ಉಂಡೋಡಿ, ನಿವೃತ್ತ ಶಿಕ್ಷಕರಾದ ವಿ.ಬಿ.ಕೆಂಚನಗೌಡರ ಹಾಗೂ ಎನ್.ಸಿ.ಪಾಟೀಲ, ಶಿವಪ್ಪ ಹೂಲಿ, ಚಂದ್ರು ಶೆಟ್ಟರ ಪುಷ್ಪನಮನ ಸಲ್ಲಿಸಿದರು. ವೇದಮೂರ್ತಿ ಸೋಮಲಿಂಗಶಾಸ್ತ್ರಿ ಗುಡ್ಡದಮಠ ಅವರ ವೇದಘೋಷದ ನಂತರ ವಿನಾಯಕ ಹಿರೇಮಠ ಸ್ವಾಗತಿಸಿದರು. ಗುರುಮೂರ್ತಿ ಯರಗಂಬಳಿಮಠ ವಂದಿಸಿದರು. ಗಾಯಕ ಗುರುಸಿದ್ಧಯ್ಯ ಸವದಿಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಡಿವಾಳಯ್ಯ ಶಹಪೂರಮಠ ತಬಲಾ ಸಾಥ್ ನೀಡಿದರು.