ರಾಜರಾಜೇಶ್ವರಿನಗರ: `ಏಪ್ರಿಲ್ ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಿ ಗುತ್ತಿಗೆ ಪೌರಕಾರ್ಮಿಕರು ಬಿಬಿಎಂಪಿ ವಲಯ ಕಚೇರಿ ಆವರಣದಲ್ಲಿ ಸೋಮವಾರ ಧರಣಿ ನಡೆಸಿದರು.
`ಕೊಟ್ಟಿಗೆಪಾಳ್ಯ ಮತ್ತು ಲಗ್ಗೆರೆ ವಾರ್ಡ್ ವ್ಯಾಪ್ತಿಯಲ್ಲಿ 280 ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು ಏಪ್ರಿಲ್ ತಿಂಗಳಿಂದ ವೇತನ ನೀಡದೆ ಗುತ್ತಿಗೆದಾರರಾದ ಕೋದಂಡಪಾಣಿ ಎಂ.ಗುಂಟಪಲ್ಲಿ ಅವರು ಕಿರುಕುಳ ನೀಡುತ್ತಿದ್ದಾರೆ' ಎಂದು ಕಾರ್ಮಿಕರು ಆಗ್ರಹಿಸಿದರು.
`ಮೂರು ತಿಂಗಳಿಂದ ವೇತನ ನೀಡದ ಕಾರಣ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸಂಬಳ ಪಾವತಿಗೆ ಕ್ರಮ ಕೈಗೊಳ್ಳಬೇಕು' ಎಂದು ಜಂಟಿ ಆಯುಕ್ತ ಭೀಮಪ್ಪ ಅವರಲ್ಲಿ ವಿನಂತಿಸಿದರು.
ಉಪ ಆಯುಕ್ತ ರಮೇಶ್ಕುಮಾರ್, `ಗುತ್ತಿಗೆದಾರರಿಗೆ ಈಗಾಗಲೇ 1.60 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ಮಂಗಳವಾರ ವೇತನವನ್ನು ನೀಡದಿದ್ದರೆ ಗುತ್ತಿಗೆಯನ್ನು ರದ್ದು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದರು.
ಪೌರಕಾರ್ಮಿಕರ ಪ್ರತಿಭಟನೆಗೆ ಎಸ್ಪಿ ಕಾರ್ಯಕರ್ತರು ಬೆಂಬಲ ಸೂಚಿಸಿದ್ದರು.