ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನಬಾಕಿ: ಕುಂಟುನೆಪ ಏಕೆ?

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದೇಶದಾದ್ಯಂತ ಇರುವ ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರಿಗೆ ಕೇಂದ್ರ ಸರ್ಕಾರವು ೨೦೦೬ ರಿಂದ ಅನ್ವಯವಾಗುವಂತೆ ನೂತನ ಯು.ಜಿ.ಸಿ. ವೇತನ ಶ್ರೇಣಿಯನ್ನು ಜಾರಿಗೊಳಿಸಿದೆ.  ಅದನ್ನು ಅನುಸರಿಸಿ ನಮ್ಮ ರಾಜ್ಯ ಸರ್ಕಾರವೂ ೨೦೦೯ರಲ್ಲಿ ಪೂರ್ವಾನ್ವಯವಾಗಿ ಈ ಆದೇಶವನ್ನು ಜಾರಿಗೆ ಕೊಟ್ಟು ಕಾಲೇಜು ಶಿಕ್ಷಕರ ಕೃತಜ್ಞತೆಗೆ ಪಾತ್ರ ವಾಯಿತು.

ಇದರಲ್ಲಿ ಮೊದಲ ಐದು ವರ್ಷ­ಗಳ ಸಂಪೂರ್ಣ ವೆಚ್ಚವನ್ನು ಯು.ಜಿ.ಸಿಯೇ ಅಂದರೆ ಕೇಂದ್ರ ಸರ್ಕಾರವೇ ಭರಿಸಲಿದೆ.  ರಾಜ್ಯ ಸರ್ಕಾರ ವೇತನಶ್ರೇಣಿಯನ್ನು ಜಾರಿಗೊಳಿಸಿತೇ ಹೊರತು ೨೦೦೬ ರಿಂದ ೨೦೦೯ರ ವರೆಗಿನ ವೇತನ­ಬಾಕಿಯನ್ನು ಇದುವರೆಗೂ ನೀಡಿಲ್ಲ. ರಾಷ್ಟ್ರದ ಬಹುತೇಕ ರಾಜ್ಯಗಳು ಈಗಾಗಲೇ ಈ ವೇತನಬಾಕಿಯನ್ನು ನೀಡಿವೆ. ಕಾಲೇಜು ಶಿಕ್ಷಕರು ಹಿಂದಿನ ಸರ್ಕಾರಕ್ಕೆ ಮತ್ತು ಈಗಿನ ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿದಾಗ್ಯೂ  ರಾಜ್ಯ ಸರ್ಕಾರ ಏನೇನೋ ಕುಂಟುನೆಪಗಳನ್ನು ಹೇಳುತ್ತ ವೇತನಬಾಕಿಯನ್ನು ನೀಡದೆ ಸತಾಯಿಸುತ್ತ ಬಂದಿರು­ವುದು ಏಕೆಂದೇ ಅರ್ಥವಾಗುತ್ತಿಲ್ಲ.

ಕೇಂದ್ರ ಸರ್ಕಾರ ಆ ಸಮಸ್ತ ವೆಚ್ಚವನ್ನು ಕೂಡಲೇ  ತುಂಬಿಕೊಡುತ್ತದಾದ ಕಾರಣ ಇದರಲ್ಲಿ ರಾಜ್ಯ ಸರ್ಕಾರ ಕಳೆದುಕೊಳ್ಳುಂಥದ್ದು ಏನೂ ಇಲ್ಲ. ಬದಲಿಗೆ ಯಾವ ಸದುದ್ದೇಶದಿಂದ ಇದನ್ನು ಕೇಂದ್ರ ಜಾರಿಗೊಳಿಸಿದೆಯೋ ಅದನ್ನು ತಾನೂ ಜಾರಿಗೊ­ಳಿಸಿದ ಕೀರ್ತಿ ಗಳಿಸುವುದರ ಜೊತೆಗೆ ವಿಶ್ವ­ವಿದ್ಯಾ ಲಯ ಮತ್ತು ಕಾಲೇಜು ಶಿಕ್ಷಕರ ವಿಶ್ವಾಸ­ವನ್ನು ಗಳಿಸುವುದು ಅಷ್ಟೇ. ಆದ್ದರಿಂದ ಕೇಂದ್ರದ ದೇವರು ವರ ಕೊಟ್ಟ ಮೇಲೂ ರಾಜ್ಯ ಸರ್ಕಾರ, ವರ ಕೊಡದಿರುವ ಪೂಜಾರಿ ಆಗದಿರಲೆಂದು ಆಶಿಸುತ್ತೇನೆ.
–ಡಾ. ಆರ್. ಲಕ್ಷ್ಮೀನಾರಾಯಣ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT