ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದು, 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದೆ. ಪಿಯುಸಿಯಲ್ಲಿ ವಿಜ್ಞಾನ ಆರಿಸಿಕೊಂಡಾಗ ಒಂದೆರಡು ತಿಂಗಳು ಕಷ್ಟವಾಯಿತು. ಆದರೆ, ಸಿಇಟಿಯಲ್ಲಿ ಉತ್ತಮ ರ್ಯಾಂಕ್ ಪಡೆದು, ಸರ್ಕಾರಿ ಕೋಟಾದಲ್ಲೇ ಎಂಬಿಬಿಎಸ್ ಪ್ರವೇಶ ಪಡೆದೆ.
ಪ್ರಥಮ ದರ್ಜೆಯಲ್ಲಿ ಪಾಸಾಗಿ, ಎಂಡಿ ಇನ್ ಜನರಲ್ ಮೆಡಿಸಿನ್ ಕೂಡಾ ಮಾಡಿದೆ. ಎಲ್ಲಿಯೂ ನನಗೆ ಕನ್ನಡ ಮಾಧ್ಯಮದ ಕೀಳರಿಮೆ ಕಾಡಲಿಲ್ಲ. ಜ್ಞಾನ ಪಡೆಯುವ ಹಂಬಲ ಇದ್ದಾಗ ಭಾಷೆ ಅಡ್ಡಿಯಾಗದು.
ಭಾಷೆ ನಮ್ಮ ಸಂವಹನಕ್ಕಾಗಿ ಮಾತ್ರ ಬೇಕು. ಏಮ್ಸ, ಜಿಪ್ಮಾರ್ ನಡೆಸಿದ ರಾಷ್ಟ್ರಮಟ್ಟದ ಪರೀಕ್ಷೆಗಳಲ್ಲೂ ನನಗೆ ರ್ಯಾಂಕ್ ಬಂದಿವೆ. ಈಗ ನಾನು ಡಿಎಂ ಇನ್ ನ್ಯೂರಾಲಜಿಯಲ್ಲಿ ಉನ್ನತ ಶಿಕ್ಷಣ ಪಡೆಯಲು ತಯಾರಾಗುತ್ತಿದ್ದೇನೆ.
ಕನ್ನಡ ಮಾಧ್ಯಮದಲ್ಲಿ ಓದಿದ್ದಕ್ಕೆ ವೈದ್ಯಕೀಯ ರಂಗವನ್ನು ಚೆನ್ನಾಗಿ ಗ್ರಹಿಸಲು ಸಾಧ್ಯವಾಗಿದೆ. ಕನ್ನಡದಲ್ಲಿ ಓದಿದ್ದು ನನ್ನಲ್ಲಿ ಹೆಮ್ಮೆ ಮೂಡಿಸಿದೆ.
-ಡಾ.ಎಂ. ಮಂಜುನಾಥ, ದಾವಣಗೆರೆ (ಬೆಂಗಳೂರಿನ ಸಾಗರ ಆಸ್ಪತ್ರೆಯ ಐಸಿಯುನಲ್ಲಿ ಕಾರ್ಯನಿರತ ವೈದ್ಯ)