ಕವಿ ದೊಡ್ಡರಂಗೇಗೌಡರು `ಯುಗವಾಣಿ' ಎಂಬ ಗೀತ ಕುಂಜವೊಂದನ್ನು ರೂಪಿಸಿದ್ದಾರೆ. ಇದು ಕವಿಮನದ ಭಾವವಾಹಿನಿ. ಸಂಗೀತ ನಿರ್ದೇಶಕ ಮತ್ಯುಂಜಯ ದೊಡ್ಡವಾಡ, ದೊಡ್ಡರಂಗೇಗೌಡರ ಸಾಹಿತ್ಯಕ್ಕೆ ಸ್ವರ ಸ್ಪರ್ಶ ನೀಡಿ ಸಾಹಿತ್ಯಕ್ಕೆ ಹೊಳಪು ನೀಡಿದ್ದಾರೆ. ಈ ಧ್ವನಿ ಸುರುಳಿಯಲ್ಲಿ ಒಂಬತ್ತು ಹಾಡುಗಳಿದ್ದು (ಯುಗವಾಣಿ, ಗುಮ್ಮಣ್ಣಗಳು, ರೈತರ ರ್ಯಾಲಿ, ಪಟ್ಟಕ್ಕಾಗಿ ಜನರು, ಕೆಂಪು ದೀಪದ, ಜಾತಿ ಧರ್ಮ, ಕ್ರಾಂತಿ ಗೀತೆ, ಎಲ್ಲೆತನಕ, ಬಾಪೂಜಿಗೆ) ಲಹರಿ ಸಂಸ್ಥೆಯವರು ಈ ಗೀತ ಕುಂಜವನ್ನು ನಿರ್ಮಾಣ ಮಾಡಿದ್ದಾರೆ.