ಬೆಳಗಾವಿ: ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ ಎಂದು ಮರಾಠಿ ಚಲನಚಿತ್ರ ನಟಿ ಸಹಿ ಲೋಕೂರ ಅಭಿಪ್ರಾಯಪಟ್ಟರು.
ನಗರದ ಕೆಎಲ್ಇ ವಿಶ್ವವಿದ್ಯಾಲಯದಲ್ಲಿ ಬುಧವಾರ ಆರಂಭವಾದ `ಟ್ರಿನಿಟಿ-11 ಗ್ರ್ಯಾಂಡಿ ಓರಾ~ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಕೆಎಲ್ಇ ವಿಶ್ವವಿದ್ಯಾಲಯದ ಕುಲಪತಿ ಡಾ.ಚಂದ್ರಕಾಂತ ಕೋಕಾಟೆ ಮಾತನಾಡಿ, ಜೀವನ ದೇವರು ಕೊಟ್ಟ ವರವಾಗಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಧನಾತ್ಮಕ ಯೋಚನೆಗಳನ್ನು ಹೊಂದಿರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರಭಾಕರ ಕೋರೆ ಮಾತನಾಡಿದರು. ಕುಲಸಚಿವ ಡಾ.ಪಿ.ಎಫ್. ಕೋಟೂರ, ಜೆ.ಎನ್. ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ವಿ.ಡಿ. ಪಾಟೀಲ, ಸಂಘಟನಾ ಅಧ್ಯಕ್ಷ ಡಾ.ಎ.ಎಸ್. ಗೋಧಿ, ಡಾ.ಎನ್.ಎಂ. ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ರಿಷಿಕೇಶ ಹಂಜಿ, ರಿಕಿತಾ ಮುಧೋಳ ಪಾಲ್ಗೊಂಡಿದ್ದರು.