ಕೃಷ್ಣರಾಜಪೇಟೆ: ಮಾರುತಿ ವ್ಯಾನ್ಗೆ ಅಳವಡಿಸಿದ್ದ ಅನಿಲ ಸಿಲಿಂಡರ್ ಸಿಡಿದ ಪರಿಣಾಮ ಮಹಿಳೆ ಮತ್ತು ಮಗುವಿಗೆ ತೀವ್ರವಾದ ಸುಟ್ಟು ಗಾಯಗಳಾದ ಘಟನೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕೆ.ಆರ್.ನಗರ ತಾಲ್ಲೂಕಿನ ದೊಡ್ಡಕೊಪ್ಪಲಿನ ಸಿರಾಜ್, ಪತ್ನಿ ಶಬನಾ ಮತ್ತು ಪುತ್ರ ಮೊಹಿದ್ ಅಹಮದ್ ಜೊತೆ ಕೆ.ಆರ್.ಪೇಟೆಯಿಂದ ತಮ್ಮೂರಿಗೆ ಹಿಂದಿರುಗುವ ವೇಳೆ ಈ ಘಟನೆ ನಡೆದಿದೆ. ಶಬನಾ ಮತ್ತು ಮೊಹಿದ್ಗೆ ಬೆನ್ನು, ಕಾಲುಗಳಿಗೆ ತೀವ್ರ ಪ್ರಮಾಣದ ಗಾಯಗಳಾಗಿವೆ.
ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರಾಜ್ ಅವರಿಗೂ ಸ್ವಲ್ಪ ಪ್ರಮಾಣದ ಗಾಯಗಳಾಗಿದ್ದು, ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ.
ಸಿಲಿಂಡರ್ ಖಾಲಿಯಾದಾಗ, ಚಾಲಕ ಪೆಟ್ರೋಲ್ಗೆ ಬದಲಾವಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ವ್ಯಾನ್ ಸಂಪೂರ್ಣಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.