ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್-ಎಹ್ಸಾನ್-ಲಾಯ್ ಸಂಗೀತ ರಸಸಂಜೆ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಒಂದು ಅದ್ಭುತ ಸಂಗೀತ ಕಛೇರಿಗೆ ಸಾಕ್ಷಿಯಾಗಲು ಬೆಂಗಳೂರು ಕ್ಷಣಗಣನೆ ಮಾಡುತ್ತಿದೆ. ಶಂಕರ್-ಎಹ್ಸಾನ್- ಲಾಯ್ ಅವರು ಒಂದೇ ವೇದಿಕೆಯಲ್ಲಿ ನಡೆಸಿಕೊಡಲಿರುವ ಈ ಸಂಗೀತ ಕಾರ್ಯಕ್ರಮವನ್ನು `ಬೆಂಗಳೂರು ಐಡಿಯಾ ರಾಕ್ಸ್ ಇಂಡಿಯಾ'ದ ಪ್ರತಿಭಾಶೋಧದ ಅಂಗವಾಗಿ ಏರ್ಪಡಿಸಲಾಗಿದೆ.

ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಇಂದು (ಶನಿವಾರ) ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಈ ತ್ರಿಮೂರ್ತಿಗಳು ಐಡಿಯಾ ರಾಕ್ಸ್ ಇಂಡಿಯಾದಲ್ಲಿ ಈಗಾಗಲೇ ಗೆದ್ದಿರುವ ಐದು ಮಂದಿ ಸ್ಪರ್ಧಿಗಳಲ್ಲಿ ಒಬ್ಬರು ವಿಜೇತರನ್ನೂ ಆಯ್ಕೆ ಮಾಡಲಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸುವ ಶ್ರೋತೃಗಳಿಗಾಗಿ ವೋಲ್ವೊ ಬಸ್‌ಗಳನ್ನೂ ಐಡಿಯಾ ಸೆಲ್ಯುಲಾರ್ ಏರ್ಪಾಡು ಮಾಡಿದೆ. ಟ್ಯಾಕ್ಸಿ ಶೇರಿಂಗ್, ಕಾರ್ ಪೂಲಿಂಗ್ ಮತ್ತು ಸಮೂಹ ಸಂಚಾರ ವ್ಯವಸ್ಥೆಯನ್ನೂ ಮಾಡಲಾಗಿದೆ. ನಗರದ ವಿವಿಧೆಡೆಗಳಿಂದ ಬಸ್‌ಗಳು ಹೊರಡಲಿವೆ. ಮುಂಗಡವಾಗಿ ಆಸನ ಕಾದಿರಿಸಲು ಮತ್ತು ಕಾರ್ಯಕ್ರಮದ ಒಟ್ಟು ವಿವರಗಳಿಗಾಗಿ ನೋಡಬೇಕಾದ ಸಂಖ್ಯೆ 080 6716 6866/ ವೆಬ್‌ಸೈಟ್ www.grallo.com/IDEARocks

ಐಡಿಯಾ ಮೊಬೈಲ್ ಸೆಲ್ಯುಲಾರ್, ಸಂಗೀತ ಪ್ರತಿಭೆಗಳ ಶೋಧಕ್ಕಾಗಿ ದೇಶದ 16 ನಗರಗಳಲ್ಲಿ ಕೈಗೊಂಡಿರುವ ಐದನೇ ಸೀಸನ್‌ನ ಶೋಧ ಪ್ರವಾಸದ ಅಂಗವಾಗಿ ಈ ಸಂಗೀತ ಕಾರ್ಯಕ್ರಮವನ್ನು ಉಚಿತವಾಗಿ ಏರ್ಪಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT