ನವದೆಹಲಿ (ಐಎಎನ್ಎಸ್): 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸೆರೆವಾಸದ ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯ್ ದತ್ ಅವರು, ತೀರ್ಪನ್ನು ಪ್ರಶ್ನಿಸಿ, ಶರಣಾಗತಿಗೆ ಇನ್ನೂ ಆರು ತಿಂಗಳು ಕಾಲಾವಕಾಶ ನೀಡುವಂತೆ ಕೋರಿ ಸಲ್ಲಿಸಿದ ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರಕ್ಕೆ ಮುಂದೂಡಿದೆ.
`ಟಾಡಾ ಕಾಯ್ದೆಯ ಅಡಿಯಲ್ಲಿ ಸಂಜಯ್ ದತ್ ಅವರಿಗೆ ಶಿಕ್ಷೆ ವಿಧಿಸಿದ ದ್ವಿಸದಸ್ಯ ಪೀಠವೇ ಸಂಜಯ್ ದತ್ ಅರ್ಜಿಯ ವಿಚಾರಣೆ ನಡೆಸುವುದು ಎಂದು ನ್ಯಾಯಮೂರ್ತಿ ಸದಾಶಿವಂ ನೇತೃತ್ವದ ಪೀಠವು ಮಂಗಳವಾರ ತಿಳಿಸಿತು. ನ್ಯಾಯಮೂರ್ತಿ ಸದಾಶಿವಂ ಮತ್ತು ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಅವರನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತ್ತು.