ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರನ್ನವರಾತ್ರಿ ವಿಶೇಷ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರಾಮ ಮಂದಿರ ಅಸೋಸಿಯೇಷನ್: ರಾಮ ದೇವರ ದೇವಸ್ಥಾನ, ಮಾಡಲ್ ಹೌಸ್ ಬ್ಲಾಕ್, ಬಸವನಗುಡಿ. ಬೆಳಿಗ್ಗೆ 7.30ಕ್ಕೆ ರಾಮದೇವರಿಗೆ ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಮಹಾಮಂಗಳಾರತಿ. ಸಂಜೆ 6ಕ್ಕೆ ಸಿಂಧು ಮತ್ತು ತಂಡದಿಂದ ಭಕ್ತಿ ಸಂಗೀತ.

ಶಾರದಾಂಬಾ, ಚಂದ್ರಮೌಳೀಶ್ವರ, ಶಕ್ತಿಗಣಪತಿ ಮತ್ತು ಶಂಕರಾಚಾರ್ಯ ಸೇವಾ ಸಮಿತಿ: ಕೆಂಗೇರಿ ಉಪನಗರ, 7ನೇ ಮುಖ್ಯರಸ್ತೆ. ಬೆಳಿಗ್ಗೆ 7ಕ್ಕೆ ನಿರ್ಮಾಲ್ಯ ವಿಸರ್ಜನೆ, ಪ್ರಾರ್ಥನೆ, ಅಭಿಷೇಕ, ಹೂವಿನ ಅಲಂಕಾರ ದರ್ಶನ, ಮಹಾಮಂಗಳಾರತಿ. ಸಂಜೆ 6ಕ್ಕೆ ಪದ್ಮಿನಿ ಶ್ರೀಧರ್ ಅವರ ನೇತೃತ್ವದಲ್ಲಿ ನೃತ್ಯ.

ನಾದಬ್ರಹ್ಮ ಕಲಾಕೇಂದ್ರ: ನಾದಬ್ರಹ್ಮ ಪ್ರಾರ್ಥನಾ ಮಂದಿರ, ಆನಂದ ನಿಲಯ, ನಂ. 27, 28 (ಮೂರನೆ ಮಹಡಿ) ವೇಣುಗೋಪಾಲರೆಡ್ಡಿ ಲೇಔಟ್, ಅರಕೆರೆ, ಬನ್ನೇರುಘಟ್ಟ ರಸ್ತೆ. ರೇವತಿ ಸದಾಶಿವಂ ಅವರ `ಗುರುಗುಹಗಾನ ವಿದ್ಯಾಲಯ~ದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವೀಣಾ ವಾದನ. ಸಂಜೆ 4.

ನಿಮಿಷಾಂಬಾದೇವಿ ದೇವಸ್ಥಾನ: ನಂ. 526, (ಅಕ್ಕಿಪೇಟೆ ಹತ್ತಿರ), ಓ.ಟಿ.ಸಿ. ರಸ್ತೆ. ಬೆಳಿಗ್ಗೆ 8ಕ್ಕೆ ಅಭಿಷೇಕ, ಸಹಸ್ರನಾಮಾರ್ಚನೆ, ಬೆಳಿಗ್ಗೆ 10ಕ್ಕೆ ಮಹಾಮಂಗಳಾರತಿ, ಸಂಜೆ 6.30ಕ್ಕೆ ಪ್ರದೋಷ ಪೂಜೆ, ಅಲಂಕಾರ, ಕುಂಕುಮಾರ್ಚನೆ, ಲಲಿತಾಸಹಸ್ರನಾಮ ಪಾರಾಯಣ, ಪ್ರಾಕಾರೋತ್ಸವ, ರಾತ್ರಿ 8.30ಕ್ಕೆ ಮಹಾಮಂಗಳಾರತಿ.

ವಾಣಿ ವಿದ್ಯಾಕೇಂದ್ರ: ವಾಣಿ ವಿದ್ಯಾಕೇಂದ್ರ ಸಭಾಂಗಣ, 2ನೇ ಹಂತ, ರಾಜಾಜಿನಗರ. ತನ್ಮಯಿ ಕೃಷ್ಣಮೂರ್ತಿ ಅವರಿಂದ ಗಾಯನ, ಸಿಂಧು ಸುಚೇತನ್ (ಪಿಟೀಲು), ರಜನಿ ವೆಂಕಟೇಶ್ (ಮೃದಂಗ), ಭಾಗ್ಯಲಕ್ಷ್ಮೀ ಎಂ. ಕೃಷ್ಣ (ಮೋರ್ಚಿಂಗ್) ಸಂಜೆ 6.30.

ಬ್ರಾಹ್ಮಣ ಸಭಾ: ಗಾಯತ್ರಿ ಮಂದಿರ, ಕೆಂಗೇರಿ ಉಪನಗರ. ವಿನಯ್ ಕುಮಾರ್ ನಾಡಿಗ್ ಅವರಿಂದ ದಾಸವಾಣಿ.  ಸಂಜೆ 6.

ಮಹಾಯಾಗ ಕ್ಷೇತ್ರ ಗಾಯತ್ರಿ ದೇವಸ್ಥಾನ: ಯಶವಂತಪುರ ಸರ್ಕಲ್ ಹತ್ತಿರ. ಬೆಳಿಗ್ಗೆ 6ಕ್ಕೆ ಗಾಯತ್ರಿ ಮಾತೆಗೆ ಅಭಿಷೇಕ, ನವರಾತ್ರಿ ಪ್ರಯುಕ್ತ ವಿಶೇಷ ಅಲಂಕಾರ, ದುರ್ಗಾಹೋಮ, ಚಂಡಿಕಾ ಪಾರಾಯಣ, ಚಂಡಿಕಾ ಹೋಮ. ಸಂಜೆ 6.30ಕ್ಕೆ ನಾಟ್ಯ ನಿನಾದ ಕಲಾವಿದರಿಂದ ಭರತನಾಟ್ಯ ಹಾಗೂ ಕೂಚಿಪುಡಿ ನೃತ್ಯ.

ವರಸಿದ್ಧಿ ವಿನಾಯಕ ದೇವಾಲಯ: ಕೆನರಾ ಬ್ಯಾಂಕ್ ಕಾಲನಿ, ನಾಗರಬಾವಿ ರಸ್ತೆ. ವಿಜಯ ಸೀತಾರಾಮ್ ಮತ್ತು ತಂಡದಿಂದ `ಸಂಗೀತ ಸೌರಭ~ ಸಂಜೆ 7.

ಪದ್ಮಾವತಿ ಕಲಾನಿಕೇತನ: 2ನೇ ಅಡ್ಡರಸ್ತೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹಿಂಭಾಗ. ಮತ್ತೀಕೆರೆ ಲೇಔಟ್. ಪದ್ಮಾವತಿ ಕಲಾನಿಕೇತನ ವಿದ್ಯಾರ್ಥಿಗಳಿಂದ ಸಂಗೀತ. ಸಂಜೆ 5.30.

ಸುಂದರ ಆಂಜನೇಯ ಸ್ವಾಮಿ ದೇವಸ್ಥಾನ: ಎನ್.ಆರ್.ಐ ಲೇಔಟ್, ಕಲ್ಕೆರೆ ಹಳ್ಳಿ, ರಾಮಮೂರ್ತಿ ನಗರ. ವೈಷ್ಣವಿ ನಾಟ್ಯಶಾಲಾ ವಿದ್ಯಾರ್ಥಿಗಳಿಂದ ಭರತನಾಟ್ಯ. ಸಂಜೆ 6.30.

ರಾಮೇಶ್ವರಸ್ವಾಮಿ ದೇವಸ್ಥಾನ: ನಂ. 34, ಕೆ.ಇ.ಬಿ. ರಸ್ತೆ, ಇಟ್ಟಮಡು, ಬನಶಂಕರಿ 3ನೇ ಹಂತ. ಬೆಳಿಗ್ಗೆ 6.30ಕ್ಕೆ ನವಗ್ರಹಾರಾಧನೆ-ಲಘುನ್ಯಾಸಪೂರ್ವಕ ಏಕವಾರ ರುದ್ರಾಭಿಷೇಕ-ದೀಪಾರಾಧನೆ. ಸಂಜೆ 7.30ಕ್ಕೆ ಶಾರದಮ್ಮ ಮತ್ತು ಮಂಜುಳಮ್ಮ ಅವರಿಂದ ಭಜನೆ.

ಗಂಗಮ್ಮ ದೇವಿ ದೇವಸ್ಥಾನ: 35ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, 4ನೇ ಟಿ ಬ್ಲಾಕ್, ಜಯನಗರ. ಐಟಿಐ ಸತ್ಸಂಗ ಭಜನಾ ಮಂಡಳಿಯಿಂದ ದೇವರನಾಮ. ಸಂಜೆ 6.30.

ನಿರ್ಮಾಣ್ ದೇವಾಲಯಗಳ ವಿಶ್ವಸ್ಥ ಮಂಡಳಿ: ನಂ.336, ಪ್ರಸನ್ನವರದ ವೆಂಕಟೇಶ್ವರ ದೇವಾಲಯ, ನಿಸರ್ಗ ಬಡಾವಣೆ. `ಶರನ್ನವರಾತ್ರಿ ಮಹೋತ್ಸವ~ದ ಅಂಗವಾಗಿ ದುರ್ಗಾಹೋಮ. ಬೆಳಿಗ್ಗೆ 11.

ಜೆ.ಪಿ.ನಗರ ವಿನಾಯಕ ಸೇವಾ ಮಂಡಳಿ: 30ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಐಟಿಐ ಬಡಾವಣೆ, ಜೆ.ಪಿ.ನಗರ ಮೊದಲನೇ ಹಂತ. ಶರನ್ನವರಾತ್ರಿ ಉತ್ಸವದ ಪ್ರಯುಕ್ತ `ಸುದರ್ಶನ ಹೋಮ~. ಬೆಳಿಗ್ಗೆ 7.

ರಾಜ ರಾಜೇಶ್ವರಿ ದೇವಸ್ಥಾನ ಟ್ರಸ್ಟ್: ಆಸ್ಟಿನ್ ಟೌನ್. ಬೆಳಿಗ್ಗೆ 7ಕ್ಕೆ ಅಮ್ಮನವರಿಗೆ ಅಭಿಷೇಕ 9ಕ್ಕೆ ಶೃಂಗೇರಿ ಶಾರದಾಂಬಾ ಅಲಂಕಾರ, ಸಹಸ್ರ ನಾಮಾರ್ಚನೆ, 6.30ಕ್ಕೆ ವಿವಿಧ ಅಲಂಕಾರ, ಅರ್ಚನೆ, ನೈವೇದ್ಯ ಹಾಗೂ ಮಹಾಮಂಗಳಾರತಿ.

ಆದಿಪರಾಶಕ್ತಿ ಅಂಬಾಭವಾನಿ ದೇವಾಲಯ: ನಂ.5, ಭವಾನಿನಗರ, ಗವೀಪುರಂ, ಕೆಂಪೇಗೌಡನಗರ, ಬಸವನಗುಡಿ. ಬೆಳಿಗ್ಗೆ 9ಕ್ಕೆ ಮಹಾಲಕ್ಷ್ಮಿ ಹೋಮ, ಸಂಜೆ 6.30ಕ್ಕೆ ಮಹಾಲಕ್ಷ್ಮಿ ಅಲಂಕಾರ ಹಾಗೂ ನವಸುಮ ಮಹಿಳಾ ಮಂಡಲಿಯಿಂದ ದೇವರ ನಾಮ.

ದುರ್ಗಾ ಮಹೇಶ್ವರಮ್ಮ ದೇವಾಲಯ: ಕೃಷ್ಣರಾಜಪುರ. ಶಬರಿ ದುರ್ಗಾಲಂಕಾರ ಹಾಗೂ ವಾಸವಿ ಮಹಿಳಾ ಮಂಡಳಿ ತಂಡದಿಂದ ದೇವರ ನಾಮ. ಸಂಜೆ 6.30.

ಕಲ್ಯಾಣ ವೆಂಕಟೇಶ್ವರ ದೇವಾಲಯ: ಡಾ.ಎಂ.ಎಸ್.ರಾಮಯ್ಯ ಚಾರಿಟಬಲ್ ಟ್ರಸ್ಟ್, ಡಾ.ಎಂ.ಎಸ್. ರಾಮಯ್ಯ ರಸ್ತೆ, ಗೋಕುಲ. ಬೆಳಿಗ್ಗೆ 6ಕ್ಕೆ ನರಸಿಂಹ ಅಲಂಕಾರ ಸಂಜೆ 5ಕ್ಕೆ ಸರ್ವಭೂಪಾಲ ಉತ್ಸವ, 6.30ಕ್ಕೆ ಉಷಾ ರಾಜನ್ ಹಾಗೂ ಸಂಗಡಿಗರಿಂದ ಹಾಡುಗಾರಿಕೆ.

ವೈದಿಕ ಧರ್ಮ ಸಂಸ್ಥಾನ: ವೇದ ವಿಜ್ಞಾನ ಮಹಾ ವಿದ್ಯಾ ಪೀಠ, ದಿ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರ, ಕನಕಪುರ ಮುಖ್ಯ ರಸ್ತೆ, ಉದಯಪುರ. ರುದ್ರಾಭಿಷೇಕ. ಸಂಜೆ 7.

ಗಣಪತಿ ಅನ್ನಪೂಣೇಶ್ವರಿ ಟ್ರಸ್ಟ್: ಅನ್ನಪೂರ್ಣೇಶ್ವರಿ ದೇವಾಲಯ, 3ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ, ಭುವನೇಶ್ವರಿ ನಗರ. ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಸಂಜೆ 6.30ಕ್ಕೆ ಶ್ರೀಗಂಧದ ಅಲಂಕಾರ.
 
ಮಹೇಶ್ವರಮ್ಮ ದೇವಿ ದೇವಾಲಯ: ಪಂಪ ಮಹಾಕವಿ ರಸ್ತೆ, ಮಹೇಶ್ವರಿ ದೇವಾಲಯ, ಶಂಕರಪುರಂ. ಮಹೇಶ್ವರಮ್ಮ ದೇವಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಅನ್ನಪೂರ್ಣೇಶ್ವರಿ ಅಲಂಕಾರ. ಸಂಜೆ 6.30.

ಕಂಚಿ ಕಾಮಕೋಟಿ ಪೀಠ: ಕಂಚಿ ಶಂಕರ ಮಠ, ಕಂಚಿ ಮಹಾಸ್ವಾಮಿ ಚಂದ್ರಶೇಖರೇಂದ್ರ ಸರಸ್ವತಿ ಮಾರ್ಗ, 5ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಮಲ್ಲೇಶ್ವರ. ಮಧ್ಯಾಹ್ನ 3ಕ್ಕೆ ಹಲಸೂರು ಸಹಸ್ರನಾಮ ಮಂಡಲಿಯಿಂದ `ಸೌಂದರ್ಯ ಲಹರಿ ಪಾರಾಯಣಂ~, ಸಂಜೆ 6.30ಕ್ಕೆ ಗಾಯತ್ರಿ ಗಿರೀಶ್ ಅವರಿಂದ ಗಾಯನ. ರಾಘವೇಂದ್ರ ರಾವ್ (ವಯೊಲಿನ್), ಪೂಂಗುಳಂ ಸುಬ್ರಮಣಿಯಂ (ಮೃದಂಗ) ಹಾಗೂ ಸುಕನ್ಯಾ ರಾಮಗೋಪಾಲ (ಘಟಂ) ಸಹಕರಿಸಲಿದ್ದಾರೆ.

ವರದಾಂಜನೇಯ ಸ್ವಾಮಿ ದೇವಸ್ಥಾನ: 7ನೇ ಮುಖ್ಯರಸ್ತೆ, ಆರ್.ಬಿ.ಲೇಔಟ್, ಜೆ.ಪಿ.ನಗರ 7ನೇ ಹಂತ. ದ್ರಾಕ್ಷಿ ಗೋಡಂಬಿ ಅಲಂಕಾರ. 

ವಿದ್ಯಾಗಣಪತಿ ದೇವಸ್ಥಾನ ಸಂಕೀರ್ಣ: 9ನೇ ಅಡ್ಡರಸ್ತೆ, 4ನೇ ಬ್ಲಾಕ್, ಬಿ.ಇ.ಎಲ್. ಬಡಾವಣೆ, ವಿದ್ಯಾರಣ್ಯಪುರ. ಮಹಾಗಣಪತಿ ಹೋಮ ಹಾಗೂ ಲಲಿತಾ ಹೋಮ. ಬೆಳಿಗ್ಗೆ 10. ಹರಿದಾಸ ಸಾಹಿತ್ಯ ಸಭಾದ ಸಿರಿಕೃಷ್ಣ ವಿಠ್ಠಲದಾಸರಿಂದ `ಶ್ರೀನಿವಾಸ ಪದ್ಮಾವತಿ ಕಲ್ಯಾಣ~ ಕುರಿತು ಪ್ರವಚನ. ಸಂಜೆ 6.30.

ಗಾಯತ್ರಿ ಪರಿಷತ್ ಮತ್ತು ವರಸಿದ್ಧಿ ವಿನಾಯಕ ದೇವಸ್ಥಾನ ವಿಶ್ವಸ್ಥ ಮಂಡಲಿ:  ಎಇಸಿಎಸ್ ಬಡಾವಣೆ, 1,2,3ನೇ ಹಂತ, ನಾಗಶೆಟ್ಟಿಹಳ್ಳಿ. ಪಂಚಾಮೃತಾಭಿಷೇಕ, ಏಕವಾರ ರುದ್ರಾಭಿಷೇಕ, ವೇದಪಾರಾಯಣ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ. ಬೆಳಿಗ್ಗೆ 9.

ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ: ಯಡಿಯೂರು, ಜಯನಗರ 7ನೇ ಬಡಾವಣೆ. ಬೆಳಿಗ್ಗೆ 6ಕ್ಕೆ ಪಂಚಾಮೃತ ಅಭಿಷೇಕ 10ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 6ಕ್ಕೆ ಕಡಲೆಕಾಳು ಅಲಂಕಾರ, ರಾತ್ರಿ 9ಕ್ಕೆ ಮಹಾಮಂಗಳಾರತಿ.
ಚಾಮುಂಡೇಶ್ವರಿ ದೇವಾಲಯಂ: ಲಿಂಗರಾಜಪುರಂ, 7ನೇ ಅಡ್ಡರಸ್ತೆ, ಸರೋಜಮ್ಮ ಲೇಔಟ್. ಮುತ್ತಿನ ಅಲಂಕಾರ. ಸಂಜೆ 6.30.

ಸಾಂಸ್ಕೃತಿಕ ಕಾರ್ಯಕ್ರಮ
ಶಾಂತಲಾ ಆರ್ಟ್ಸ್ ಟ್ರಸ್ಟ್: ಪುಲಕೇಶಿ ರಸ್ತೆ, 1ನೇ ಮುಖ್ಯರಸ್ತೆ, ಪೆಟ್ರೋಲ್ ಬಂಕ್ ಹಿಂಭಾಗ, ಯಶವಂತಪುರ. ದಸರಾ ಗೊಂಬೆಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಮೇಳ ಅಂಗವಾಗಿ ಕೇಶವ ನೃತ್ಯ ಶಾಲೆಯ ಬಿ.ಕೆ.ಶ್ಯಾಮ್ ಪ್ರಕಾಶ್ ಅವರಿಂದ ಭರತನಾಟ್ಯ. ಸಂಜೆ 6.30.

ಸುಸ್ವರ ಕಲಾವೃಂದ: ಆರ್.ಕೆ. ಟ್ಯುಟೋರಿಯಲ್ಸ್, ನಂ2, ಎಬಿ ಶ್ರೀಗೋಪಾಲ ವಿಠ್ಠಲನಿಲಯ, ಮಂಗನಹಳ್ಳಿ ಕ್ರಾಸ್ ಸಮೀಪ, ಉಲ್ಲಾಳ ಮುಖ್ಯರಸ್ತೆ. `ಸುಗಮ ಸಂಗೀತ ಶಾಲೆ ಆರಂಭ~. ಉದ್ಘಾಟನೆ- ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಾಯಕ ಪ್ರಾಧ್ಯಾಪಕ ಮುರಳೀಧರ್ ಶರ್ಮ. ಅಧ್ಯಕ್ಷತೆ- ಐಐಟಿಜೆಇಇ ಗಣಿತಶಾಸ್ತ್ರ ವಿಭಾಗ ಪ್ರಾಧ್ಯಾಪಕ ಕೆ.ಟಿ. ರಾಜೇಂದ್ರ ಕುಮಾರ್. ಉಪಸ್ಥಿತಿ- ಕಲಾವೃಂದ ಸಂಸ್ಥಾಪಕ ವೈ.ಎಸ್. ಕೃಷ್ಣಮೂರ್ತಿ, ಆರ್.ಕೆ. ಟ್ಯುಟೋರಿಯಲ್ಸ್ ಕಾರ್ಯದರ್ಶಿ ಪೂಜಾ ಆರ್.  ಅತಿಥಿ- ಗಾಯಕಿ ಸಂಧ್ಯಾ ಲಕ್ಷ್ಮಿ. ಸಂಜೆ 5.30.

ಸಿರಿ ಕಲಾಮೇಳ ಬೆಂಗಳೂರು: ಚೌಡೇಶ್ವರಿ ದೇವಸ್ಥಾನ ಸಭಾಭವನ, ಬೇಗೂರು. ಮೇಳದ ಕಲಾವಿದರಿಂದ `ಮಾರುತಿ ಪ್ರತಾಪ~ ಪೌರಾಣಿಕ ಯಕ್ಷಗಾನ ಪ್ರದರ್ಶನ. ಸಂಜೆ 6.
ಸಿರಿಕಲಾ ಮೇಳದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಹಾಸ್ಯ ಕಲಾವಿದ ಶ್ರೀಧರ ಹೆಗಡೆ ಚಪ್ಪರಮನೆ ಅವರಿಗೆ `ಸಿರಿಕಲಾ ಪ್ರಶಸ್ತಿ~ ಪ್ರದಾನ. ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT