ಬೆಂಗಳೂರಿನ ಆಸ್ಪತ್ರೆಗಳಲ್ಲಿ ರಾಜ್ಯ ವಿವಿಧೆಡೆಯಿಂದ ಬಂದ ರೋಗಿಗಳು ಚಿಕಿತ್ಸೆಗೆ ದಾಖಲಾಗುತ್ತಾರೆ. ಇಂಥವರಲ್ಲಿ ಅನೇಕರು ಆಸ್ಪತ್ರೆಗಳಲ್ಲಿಯೇ ನಿಧನರಾಗುತ್ತಾರೆ.ಶವಗಳನ್ನು ಅವರ ಹುಟ್ಟೂರಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗದೇ ಬಡವರು ಪರದಾಡುತ್ತಾರೆ.
ದೂರದ ಊರುಗಳಿಗೆ ಅಥವಾ ಬೇರೆ ಜಿಲ್ಲೆಗಳಿಗೆ ಶವ ಸಾಗಿಸಲು ವಿಪರೀತ ಖರ್ಚಾಗುತ್ತದೆ. ಸರ್ಕಾರ ಇಂಥವರಿಗೆ ನೆರವಾಗಲೆಂದು ‘108 ಆಂಬ್ಯುಲೆನ್ಸ್’ ಮಾದರಿಯಲ್ಲಿ ಶವ ಸಾಗಣೆ ವಾಹನದ ವ್ಯವಸ್ಥೆ ಮಾಡಬೇಕು.