ಚಿಂಚೋಳಿ (ಗುಲ್ಬರ್ಗ ಜಿ): ಒಂದು ದಶಕದ ಹಿಂದೆ ಜೀವಂತವಿರುವಾಗಲೇ ಗುಹೆ ಸಹಿತ ಸಮಾಧಿ ನಿರ್ಮಿಸಿಕೊಂಡಿದ್ದ `ದ್ವಿತೀಯ ಶ್ರೀಶೈಲ' ಖ್ಯಾತಿಯ ಸುಕ್ಷೇತ್ರ ನರನಾಳದ ಶಾಂತವೀರ ಶಿವಾಚಾರ್ಯರು (95) ಶುಕ್ರವಾರ ಲಿಂಗೈಕ್ಯರಾದರು.
ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಗುಲ್ಬರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಲ್ಲಿಕಾರ್ಜುನ ದೇವಾಲಯದ ಎಡ ಭಾಗದಲ್ಲಿ ಸಮಾಧಿ ಸಹಿತ ಗುಹೆ ನಿರ್ಮಿಸಿಕೊಂಡಿದ್ದ ಅವರು ಸಾವಿಗಾಗಿ ದಶಕದಿಂದ ಕಾಯುತ್ತಿದ್ದರು. ತಾವು ಲಿಂಗೈಕ್ಯರಾದರೆ ನರನಾಳದಲ್ಲಿ ಸಮಾಧಿ ಮಾಡುವಂತೆ ಇಚ್ಛಾಪತ್ರ ಬರೆದಿಟ್ಟಿದ್ದರು.