ಗದಗ: ಸಹಬಾಳ್ವೆ, ಸಹನೆ, ಅಹಿಂಸಾ ಸಂದೇಶವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಕೀರ್ತಿ ಜೈನ ಧರ್ಮಕ್ಕೆ ಸಲು್ಲತ್ತದೆ ಎಂದು ಗದಗ ಬೆಟಗೇರಿ ನಗರಸಭೆ ಮಾಜಿ ಅಧ್ಯಕ್ಷ ಎಲ್.ಡಿ.ಚಂದಾವರಿ ಅಭಿಪ್ರಾಯಪಟ್ಟರು.
ರಾಜೀವಗಾಂಧಿ ನಗರದ ಈಶ್ವರ ದೇವಸಾ್ಥನದಲ್ಲಿ ಜಿಲ್ಲಾ ಜೈನ ಬಾಂಧವರ ಹಾಗೂ ಜೈನೇತರರೊಂದಿಗೆ ನಡೆದ ದಶಲಕ್ಷ ಪರ್ವದ ಸಾಮೂಹಿಕ ಕ್ಷಮಾವಳಿ ಉದಾ್ಘಟಿಸಿ ಮಾತನಾಡಿದರು. ವ್ಯಸನ ಮುಕ್ತ ಬದುಕು ನಮ್ಮದಾಗಲು ಅಹಿಂಸೆ, ಶಾಂತಿ ಸಮನ್ವಯತೆ ಅವಶ್ಯಕತೆ ಇದ್ದು, ಸರ್ವಧರ್ಮಗಳು ಬಿತ್ತುವ ಸಾರವು ಒಂದೆಯಾಗಿದೆ ಎಂದರು.
ಪ್ರೊ.ಆರ್.ಎಸ್.ಕಲ್ಲನಗೌಡರ ಮಾತನಾಡಿ, ಬದುಕಿನ ಅರಿಷಡ್ವರ್ಗಗಳನ್ನು ಧ್ಯಾನ, ತಪಸ್ಸು, ಯೋಗ, ಸತ್ಸಂಗಳಿಂದ ಗೆಲ್ಲಬಹುದು. ಇಂದು ಜಗತ್ತನ್ನು ಹಿಂಸೆಯು ಅಲ್ಲಾಡಿಸುತ್ತಿದ್ದು, ಶಾಂತಿ ಮಂತ್ರ ಪಠಿಸಬೇಕಾಗಿದೆ. ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.
ಶಿರಡಿ ಸತ್ಸಂಗ ಸಮಿತಿ ಅಧ್ಯಕ್ಷ ಐ.ಕೆ.ಬಲೂಚಗಿ ಮಾತನಾಡಿ, ಕೋಪ ತಾಪಗಳಿಗೆ ಬಲಿಯಾಗದೆ ಮನಸ್ಸನ್ನು ಶುದ್ಧೀಕರಿಸಬೇಕು ಎಂದರು. ಶಿಕ್ಷಕಿ ಕವಿತಾ ದಂಡಿನ, ನಗರಸಭಾ ಸದಸ್ಯ ಅನಿಲ್ ಶಿಂಗಟಾಲಕೇರಿ, ಡಾ.ಅಪ್ಪಣ್ಣ ಹಂಜೆ, ಚನ್ನಬಸವ ಅಕ್ಕಿ, ಎನ್.ಎಂ.ಪಾಟೀಲ ಜಿ.ಬಿ.ಕಂಕ್ರಿ, ಸತ್ಯಪ್ಪ ಕೋಲಕಾರ, ದ್ರಾಕ್ಷಾಯಣಿ ಮಾಲಗಿತ್ತಿಮಠ, ಸಿದ್ದಪ್ಪ ಇಟಗಿ, ಬಸವರಾಜ ಬ್ಯಾಹಟ್ಟಿ, ಎಂ.ಬಿ.ಕೊಳವಾರ, ಬಸವರಾಜ ಕಡೇಮನಿ, ಸೋಮನಗೌಡ್ರ, ವೆಂಕಟೇಶ, ರಾಜು, ಮುಳಗುಂದ ಹಾಜರಿದ್ದರು.