ಮುಜಾಫರ್ನಗರ (ಪಿಟಿಐ): ಕೋಮು ಗಲಭೆಗೆ ಮೂಲ ಎನ್ನಲಾದ ಯುವಕರ ಕೀಟಲೆಗೆ ಗುರಿಯಾದ 9ನೇ ತರಗತಿಯ ಸೀಮಾ (14) ಮತು್ತ 12ನೇ ತರಗತಿ ಪೂನಂ (16) ಈಗ (ಇಬ್ಬರ ಹೆಸರು ಬದಲಿಸಲಾಗಿದೆ) ಸುರಕ್ಷತೆಯ ಬೆದರಿಕೆ ಕಾರಣ ಶಾಲೆಬಿಡುವ ಸ್ಥಿತಿಯಲ್ಲಿದ್ದಾರೆ.
‘ಶಾಲೆಗೆ ಹೋಗುವಾಗ ಮತು್ತ ಬಸ್ಗೆ ಕಾಯುವಾಗ ಯುವಕರ ಗುಂಪು, ತಮ್ಮನು್ನ ಕೀಟಲೆ ಮಾಡಿ ಮಾರ್ಗದಲಿ್ಲ ತಡೆಯುತಿ್ತದ್ದರು’ ಎಂದು ಬಾಲಕಿಯರು ಹೇಳುತ್ತಾರೆ.
2 ತಿಂಗಳ ಹಿಂದೆಯಷ್ಟೇ ಶಾಲೆಗೆ ಸೇರಿದ ಸೀಮಾ, ಯುವಕರ ಕೀಟಲೆ ಬಗೆ್ಗ ಮನೆಯಲಿ್ಲ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಪುತ್ರ ಗೌರವ್ (17) ಬಸ್ ನಿಲ್ದಾಣದವರೆಗೆ ಆಕೆಯನು್ನ ಬಿಟು್ಟ ಬರುತಿ್ತದ್ದ ಎಂದು ತಂದೆ ರವೀಂದರ್ ಕುಮಾರ್ ತಿಳಿಸುತ್ತಾರೆ.
ಹಿನೆ್ನಲೆ: ಬಾಲಕಿಯರನು್ನ ಯುವ ಕರು ಚುಡಾಯಿಸಿದ ಘಟನೆ ನಂತರ ಗಲಭೆ ನಡೆದಿದೆ. ಮೊದಲಿಗೆ ಆ. 27ರಂದು ಬಾಲಕಿಯರನು್ನ ಚುಡಾಯಿಸಿದ ಕಾರಣ ಶಹನವಾಜ್ ಖುರೇಷಿ ಹಾಗೂ ಆತನ ಮೇಲೆ ಹಲೆ್ಲ ನಡೆಸಿದ ಸೀಮಾಳ ಸಹೋದರ ಗೌರವ್ ಮತ್ತು ಪೂನಂ ಚಿಕ್ಕಪ್ಪ ಸಚಿನ್ ಸಿಂಗ್ ಹತ್ಯೆಯಾಗಿದ್ದರು.