ಈಗ ಏತ ನೀರಾವರಿ ಹೋಜನೆಗೆ ಹಲವು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಸಿಬ್ಬಂದಿ ಹಾಗೂ ವಿದ್ಯುತ್ಬಿಲ್ ಸೇರಿದಂತೆ ನಿರ್ವಹಣಾ ವೆಚ್ಚ ದುಬಾರಿಯಾಗಲಿದೆ. ಆದ್ದರಿಂದ ರಾಜಗಾಲುವೆಯಲ್ಲಿ ನೀರು ಹರಿಸಲು ಹೆಚ್ಚಿನ ಹಣ ವ್ಯಯವಾಗುವುದಿಲ್ಲ ಎಂದು ತಿಳಿಸಿದರು.
ರಣಘಟ್ಟ ಒಡ್ಡು ಹಾಗೂ ಯಗಚಿ ನದಿ ರಾಜಗಾಲುವೆ ನಕಾಶೆಯೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಶಾಶ್ವತ ನೀರಾವರಿ ಯೋಜನೆಗೆ ಮನವಿ ಮಾಡಲಾಗುವುದು ಎಂದು ರೈತಸಂಘ ಸದಸ್ಯರು ತಿಳಿಸಿದರು.
ಯಗಚಿ ಹೋರಾಟ ಸಮಿತಿ ಅಧ್ಯಕ್ಷ ಗುರುಸ್ವಾಮಿಗೌಡ, ರೈತಸಂಘ ತಾಲ್ಲೂಕು ಘಟಕದ ಉಪಾಧ್ಯಕ್ಷ ಎಲ್.ಈ.ಶಿವಪ್ಪ, ಹೋಬಳಿ ಅಧ್ಯಕ್ಷ ಚನ್ನೇಗೌಡ, ಗೌರವಾಧ್ಯಕ್ಷ ಗಡಿ ಮಲ್ಲಿಕಾರ್ಜುನ, ಸಂಚಾಲಕ ಕೆ.ಪಿ.ಕುಮಾರ್, ಮುಖಂಡರಾದ ಎಚ್.ಎಸ್.ಕಾಂತರಾಜು, ದ್ಯಾವಪ್ಪನಹಳ್ಳಿ ಪುಟ್ಟರಾಜು ಇತರರು ಇದ್ದರು.