`ಆರು ವರ್ಷಗಳ ಹಿಂದೆ ರೂಪಿಸಿರುವ ಮಾನದಂಡದ ಪ್ರಕಾರ ಅನುದಾನ ಹಂಚಿಕೆ ಮಾಡುವುದು ಸರಿಯಲ್ಲ, ಸಿಮೆಂಟ್, ಮರಳು ದರ ಹೆಚ್ಚಾಗಿದೆ. ಆದ್ದರಿಂದ 2001ರ ಬದಲಿಗೆ, 2011ರ ಜನಗಣತಿಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಬೇಕು.
ಒಬ್ಬ ವ್ಯಕ್ತಿಗೆ ಐದು ಸಾವಿರ ರೂಪಾಯಿ ಪ್ರಕಾರ ಗ್ರಾಮದ ಒಟ್ಟು ಜನಸಂಖ್ಯೆಯನ್ನು ಆಧರಿಸಿ ಅನುದಾನ ನಿಗದಿ ಮಾಡಬೇಕು. ಆಗ ಮಾತ್ರ ಶೇ 100ರಷ್ಟು ಕಾಮಗಾರಿಗಳು ಪೂರ್ಣಗೊಳ್ಳಲು ಸಾಧ್ಯ~
`ಮೊದಲ ಹಂತದಲ್ಲಿ ನನ್ನ ಕ್ಷೇತ್ರದ ಕಾಡ್ಲ, ಮುದೋಳ ಗ್ರಾಮದಲ್ಲಿ ಈ ಯೋಜನೆ ಅನುಷ್ಠಾನಗೊಂಡಿತ್ತು. ಸರ್ಕಾರದ ಅನುದಾನದಲ್ಲಿ ಶೇ 50ರಿಂದ 60ರಷ್ಟು ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಕೊನೆಗೆ ಜಲಾನಯನ ಯೋಜನೆಯ ಅನುದಾನವನ್ನು ಬಳಸಿಕೊಂಡು ಸುವರ್ಣ ಗ್ರಾಮ ಯೋಜನೆಯನ್ನು ಪೂರ್ಣಗೊಳಿಸಲಾಯಿತು~
ಡಾ.ಶರಣ ಪ್ರಕಾಶ್ ಪಾಟೀಲ್, ಶಾಸಕರು, ಸೇಡಂ