ಈಗ ಸರ್ಕಾರದ ನೆರವಿಲ್ಲದೆ ಹಲವು ಸಂಘಟನೆಗಳು ಕಲಾ ಸೇವೆಯಲ್ಲಿ ತೊಡಗಿವೆ. ಸಾಂಸ್ಕೃತಿಕ ತಂಡಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರದ ನಿಯಮಾವಳಿ ಅಡ್ಡ ಬರಬಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಾಟ್ಯ ತರಂಗ ಟ್ರಸ್ಟ್ನ ಅಧ್ಯಕ್ಷ ಅಂದಗಾರು ಜನಾರ್ದನ್ ಮಾತನಾಡಿ, ಭರತನಾಟ್ಯದಂತಹ ಶಾಸ್ತ್ರೀಯ ನೃತ್ಯ ಪ್ರಕಾರದಲ್ಲಿ ಪರಿಣಿತಿ ಸಾಧಿಸಲು ಗುರುವಿನ ಮಾರ್ಗದರ್ಶನದ ಜತೆಗೆ, ಅಪಾರ ಪರಿಶ್ರಮ, ಶ್ರದ್ಧೆ ಅಗತ್ಯವಿದೆ. ಇದನ್ನು ಕಲಿಸುವ ಕೆಲಸವನ್ನು ನಾಟ್ಯ ತರಂಗ ಸಂಸ್ಥೆ ಮಾಡುತ್ತಿದೆ ಎಂದರು.
ಉದ್ಯಮಿ ಸಿ. ಗೋಪಾಲಕೃಷ್ಣ ರಾವ್, ವಿದ್ವಾನ್ ಜನಾರ್ದನ ಜಿ.ಬಿ. ಹಾಜರಿದ್ದರು. ಸಮನ್ವಿತ ಹಾಗೂ ನಂದಿನಿ ಪ್ರಾರ್ಥಿಸಿದರು. ವಸುಧಾ ಸ್ವಾಗತಿಸಿದರು. ಟಿ.ಎಸ್. ರಾಘವೇಂದ್ರ ಪ್ರಸ್ತಾವಿಕ ಮಾತನಾಡಿದರು. ರಮ್ಯಾ ಪಿ. ಕುಮಾರ್ ವಂದಿಸಿದರು.