ನೆಲಮಂಗಲ: ತಾಲ್ಲೂಕಿನ ಶಿವಗಂಗೆಯಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ಶನಿವಾರ ನಡೆಯಲಿದೆ.
ಸಮುದ್ರ ಮಟ್ಟದಿಂದ 4,547 ಅಡಿ ಎತ್ತರದಲ್ಲಿ ಇರುವ ಬೆಟ್ಟದ ತುತ್ತತುದಿಯ ತೀರ್ಥ ಕಂಬದ ಬುಡದಲ್ಲಿ, ಮಕರ ಸಂಕ್ರಾಂತಿಯ ಪರ್ವ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಉತ್ಪತ್ತಿ ಆಗುವ ನೀರಿನಿಂದ ಗಂಗಾಧರೇಶ್ವರನಿಗೆ ಧಾರಾ ಮಹೋತ್ಸವ ನಡೆಯಲಿದೆ. ಜ. 19ರವರೆಗೆ ದನಗಳ ಜಾತ್ರೆ ನಡೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.