ಪಾದಚಾರಿ ಮಾರ್ಗಗಳ ಒತ್ತುವರಿ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಶಿವಾಜಿನಗರದ ಬಿ.ಎಸ್.ಮುನೀರ್ ಅಹ್ಮದ್, ಜುಮ್ಮಾ ಮಸೀದಿ ರಸ್ತೆ, ತಾಜ್ ಹೋಟೆಲ್ ವೃತ್ತ, ಎಚ್ಕೆಪಿ ರಸ್ತೆ, ಬ್ರಾಡ್ವೇ ರಸ್ತೆ ಮತ್ತಿತರ ಕಡೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಬೀದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಅವರನ್ನು ತೆರವುಗೊಳಿಸುವಂತೆ ಕೋರಿ 2009ರ ಮೇ 6 ಮತ್ತು 2010ರ ಸೆಪ್ಟೆಂಬರ್ 25ರಂದು ಮನವಿ ಸಲ್ಲಿಸಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದರು.