ಬೆಂಗಳೂರು: ತಾಯಿಯನ್ನು ಕಳೆದುಕೊಂಡಿದ್ದ ಹಸುಗೂಸು ಈಗ ಮಡಿವಾಳದಲ್ಲಿರವ ಶಿಶು ಮಂದಿರ ಸೇರಿದೆ.
ಕಮಲಾನಗರದ ನಿವಾಸಿ ಪೂರ್ಣಿಮಾ ಏ.22ರಂದು ವಾಯುವಿಹಾರಕ್ಕೆ ಹೋಗಿ ಉದ್ಯಾನದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದರು.
ತೀವ್ರ ರಕ್ತಸ್ರಾವ ಉಂಟಾಗಿ ಅವರು ಸಾವನ್ನಪ್ಪಿದ್ದರು. ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದೀಗ ಮಗುವಿನ ಆರೋಗ್ಯ ಸ್ಥಿತಿ ಸುಧಾರಿಸಿದೆ.