ನವಸಮಾಜ ನಿರ್ಮಾಣಕ್ಕೆ ನಿಷ್ಠಾವಂತ ಸಂಘಟನೆ ಅಗತ್ಯ
ಗೋಪಬಂಧುನಗರ, ಜ. 9 –ಸಮಾಜವಾದ ಮತ್ತು ಪ್ರಜಾಪ್ರಭುತ್ವಗಳ ಮೂಲಸಿದ್ಧಾಂತದ ಆಧಾರದ ಮೇಲೆ ರಾಷ್ಟ್ರದಲ್ಲಿ ನವಸಮಾಜವೊಂದನ್ನು ನಿರ್ಮಿಸಲು ಈ ಎರಡೂ ಸಿದ್ಧಾಂತಗಳಲ್ಲಿ ನಿಷ್ಟಯುಳ್ಳವರೆಲ್ಲರೂ ಸಂಘಟಿತರಾಗಬೇಕೆಂಬುದು ಕಾಂಗ್ರೆಸ್ನ ನೂತನ ಅಧ್ಯಕ್ಷ ಶ್ರೀ ಕಾಮರಾಜ್ರು ಇಂದು ಮಾಡಿದ ಅಧ್ಯಕ್ಷ ಭಾಷಣದ ಮುಖ್ಯ ತಿರುಳಾಗಿದ್ದಿತು.
ಗೋವ ವಿಧಾನ ಸಭೆಯ ಪ್ರಥಮ ಅಧಿವೇಶನ ಆರಂಭ
ಪಂಜಿಂ, ಜ. 9 – ಇಲ್ಲಿ ಇಂದು ಮೊದಲ ಬಾರಿಗೆ ಸಮಾವೇಶಗೊಂಡ ಗೋವಾ, ಡಿಯು ಮತ್ತು ಡಾಮನ್ನ ಪ್ರಥಮ ಶಾಸನ ಸಭೆಯು, ಈ ಪೋರ್ಚುಗೀಸ್ ಪ್ರದೇಶವನ್ನು ವಿಮುಕ್ತಿಗೊಳಿಸಲು ಭಾರತ ಸರ್ಕಾರ ಕೈಗೊಂಡ ಕ್ರಮವನ್ನು ಸರ್ವಾನುಮತದಿಂದ ಒಪ್ಪಿತು.