ಸಂಪುಟಕ್ಕೆ ನಾಲ್ವರು ಹೊಸಬರು?
ಬೆಂಗಳೂರು, ಫೆ. 24 - ಮೈಸೂರು ರಾಜ್ಯ ಕಾಂಗ್ರೆಸ್ಸಿನಲ್ಲಿರುವ ಭಿನ್ನಾಭಿಪ್ರಾಯ ಪರಿಹಾರದ ಪರಿಣಾಮ ನಾಲ್ವರು ನೂತನ ಮಂತ್ರಿಗಳು ನೇಮಕವಾಗುವುದಲ್ಲದೇ 9 ಮಂದಿ ಸದಸ್ಯರ (ಮುಖ್ಯಮಂತ್ರಿ ಹಾಗೂ ಎಂ.ಪಿ.ಸಿ.ಸಿ. ಅಧ್ಯಕ್ಷರೂ ಸೇರಿ) ಪ್ರದೇಶ ಕಾಂಗ್ರೆಸ್ ಚುನಾವಣೆ ಸಮಿತಿ ರಚನೆಯಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸಚಿವರಿಬ್ಬರ ಭಿನ್ನ ನಿಲುವು
ನವದೆಹಲಿ, ಫೆ. 24 - ಸಚಿವರಿಬ್ಬರು ಇಂದು ಸರ್ಕಾರದ ನೀತಿಯೊಂದರ ವಿಷಯದಲ್ಲಿ ಲೋಕ ಸಭೆಯಲ್ಲಿ ಭಿನ್ನ ಭಿನ್ನ ರೀತಿಯ ಹೇಳಿಕೆಗಳನ್ನಿತ್ತರು.
ರೈತರ ಬ್ಯಾಂಕುಗಳನ್ನು ಸ್ಥಾಪಿಸುವ ವಿಷಯದಲ್ಲಿ ಶ್ರೀ ಎಸ್. ಕೆ. ಡೇ ಮತ್ತು ಡಾ. ಪಂಜಾಬರಾವ್ ದೇಶಮುಖ್ರ ನಡುವೆ ಮಾತಿನ ಚಕಮಕಿ ನಡೆಯಿತು.