ರಾಷ್ಟ್ರಾದ್ಯಂತ ಗಣರಾಜ್ಯೋತ್ಸವ
ನವದೆಹಲಿ, ಜ. 26 - ಭಾರತದ ಹದಿಮೂರನೆ ಗಣರಾಜ್ಯೋತ್ಸವವನ್ನು ರಾಷ್ಟ್ರಾದ್ಯಂತ ಇಂದು ವೈಭವದಿಂದ ಆಚರಿಸಲಾಯಿತು. ಎಷ್ಟೋ ಕಡೆ ತುಂತುರು ಮಳೆ ಹಾಗೂ ಅಹಿತಕರ ಹವಾ ಪರಿಸ್ಥಿತಿ ಇದ್ದಾಗ್ಯೂ ಸಹ ಅತಿ ಉತ್ಸಾಹದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
676 ಮಂದಿ ಸ್ಪರ್ಧೆ
ಬೆಂಗಳೂರು, ಜ. 26 - ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅವಿರೋಧವಾಗಿ ಆಯ್ಕೆಯಾಗಿರುವ ಕಾರಣ, 1962ರ ಮಹಾಚುನಾವಣೆಯಲ್ಲಿ ಮತದಾನ ನಡೆಯುವ 206 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 676 ಮಂದಿ ಸ್ಪರ್ಧಿಸಿದ್ದಾರೆ.