ಕಾಶ್ಮೀರ: ಕೆನಡಿ ಸಲಹೆಗೆ ನೆಹರೂರಿಂದ ನಿರಾಕರಣೆ
ಲಕ್ನೋ, ಫೆ. 2 - ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಯೂಜೀನ್ ಬ್ಲಾಕ್ರನ್ನು ಮಧ್ಯಸ್ಥಿಕೆಗಾಗಿ ಕಳುಹಿಸುವ ಅಮೆರಿಕ ಅಧ್ಯಕ್ಷ ಕೆನೆಡಿಯವರ ಸಲಹೆಯನ್ನು ಪ್ರಧಾನ ಮಂತ್ರಿ ನೆಹರೂರವರು ನಿರಾಕರಿಸಿದರು.
ರಾಷ್ಟ್ರದ ಪರಮಾಧಿಕಾರ ಸಂಬಂಧಪಟ್ಟ ಯಾವ ವಿಷಯವನ್ನಾಗಿ ಮಧ್ಯಸ್ಥಿತಿಕೆಗೆ ವಹಿಸುವುದನ್ನು ತಾವು ವಿರೋಧಿಸುವುದಾಗಿ ನೆಹರು ನುಡಿದರು. ಈ ವಿಷಯಗಳನ್ನು ಸಂಬಂಧಪಟ್ಟವರು ಮಾತ್ರ ಚರ್ಚಿಸಬೇಕೆಂದರು.
ಪ್ರತಿ ಜಿಲ್ಲೆಗೂ ಎರಡು ಕೈಗಾರಿಕೆ ಎಸ್ಟೇಟ್
ಹುಬ್ಬಳ್ಳಿ, ಫೆ. 2 - ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿಯೂ ಎರಡು ಕೈಗಾರಿಕಾ ಎಸ್ಟೇಟುಗಳನ್ನೂ ಮತ್ತು `ಒಂದೊಂದು ಅಭಿವೃದ್ಧಿ ಪ್ರದೇಶ~ವನ್ನೂ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆಯೆಂದು ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ನಿನ್ನೆ ತಿಳಿಸಿದರು.