ತೇಜ್ಪುರ, ಡಿ. 6 - ಗಡಿ ರಕ್ಷಣೆಗಾಗಿ ತನ್ನ ಕಡೆ ಹೋರಾಡಲು ಯಾವುದೇ ವಿದೇಶಿ ಭೂ ಪಡೆಯನ್ನು ಭಾರತ ಬರಮಾಡಿಕೊಳ್ಳುವುದಿಲ್ಲವೆಂದು ಪ್ರಧಾನ ಮಂತ್ರಿ ನೆಹರೂರವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.ವಿದೇಶದಿಂದ ಮಿಲಿಟರಿ ತಜ್ಞರು ಬರಬಹುದು. ಆದರೆ ಯಾವುದೇ ದೇಶದಿಂದ ಭೂ ಸೈನಿಕರನ್ನು ನಾವು ನಿರೀಕ್ಷಿಸುವುದಿಲ್ಲ' ಎಂದೂ ಅವರು ಪತ್ರಿಕಾ ಸಮ್ಮೇಳನದಲ್ಲಿ ಹೇಳಿದರು.