ಮುಂಬೈ(ಪಿಟಿಐ): ಕ್ರೆಡಿಟ್ ಕಾರ್ಡ್ ಬಳಸಿ ಸರಕುಗಳನ್ನು ಖರೀದಿಸಿ, ನಂತರ ಯಾವುದೇ ಬಡ್ಡಿ ದರ ಇಲ್ಲದೆ (ಶೂನ್ಯ ಬಡ್ಡಿ ದರ) ಸಮಾನ ಮಾಸಿಕ ಕಂತುಗಳ (ಇಎಂಐ) ಮೂಲಕ ಸಾಲ ಮರುಪಾವತಿ ಮಾಡುವಂತಹ ಜನಪ್ರಿಯ ಸಾಲ ಯೋಜನೆಗಳನ್ನು ನಿಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ವಾಣಿಜ್ಯ ಬ್ಯಾಂಕುಗಳಿಗೆ ಸೂಚನೆ ನೀಡಿದೆ.
ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಸಲುವಾಗಿಯೇ ಶೂನ್ಯ ಬಡ್ಡಿ ದರದ ಸಾಲ ಯೋಜನೆ ನಿಲ್ಲಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿರುವುದಾಗಿ ‘ಆರ್ಬಿಐ’ ಸ್ಪಷ್ಟಪಡಿಸಿದೆ.
ಗ್ರಾಹಕರ ಸೆಳೆಯುವ ತಂತ್ರ: ಕ್ರೆಡಿಟ್ ಕಾರ್ಡ್ ಬಳಸಿ ಸರಕು ಗಳನ್ನು ಖರೀದಿಸಿ, ನಂತರ ಯಾವುದೇ ಬಡ್ಡಿ ದರ ಇಲ್ಲದೆ (ಶೂನ್ಯ ಬಡ್ಡಿ ದರ) ‘ಇಎಂಐ’ ಪಾವತಿಸಿ ಎನ್ನುವುದು ಗ್ರಾಹ ಕರನ್ನು ಸೆಳೆಯುವ ತಂತ್ರ ಮಾತ್ರ. ವಹಿವಾಟು ಪ್ರಕ್ರಿಯೆ ಶುಲ್ಕದ ರೂಪದಲ್ಲಿ ನಂತರ ಗ್ರಾಹಕರಿಂದ ಬಡ್ಡಿ ವಸೂಲು ಮಾಡಲಾಗುತ್ತದೆ. ಕೆಲವು ಬ್ಯಾಂಕು ಗಳು ಸಾಲ ನೀಡುವಾಗಲೇ ಮೂಲ ದಲ್ಲೇ ಬಡ್ಡಿ ಕಡಿತ ಮಾಡುತ್ತಿರುವುದು ಕೂಡ ‘ಆರ್ಬಿಐ’ ಗಮನಕ್ಕೆ ಬಂದಿದೆ. ಇಂತಹ ಯೋಜನೆಗಳಲ್ಲಿ ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಯಾವುದೇ ಉದ್ದೇಶ ಇಲ್ಲ. ಆದ್ದರಿಂದ ಇದರ ಮೇಲೆ ನಿಷೇಧ ಹೇರಲಾಗುತ್ತಿದೆ ಎಂದು ‘ಆರ್ಬಿಐ’ ಸ್ಪಷ್ಟಪಡಿಸಿದೆ.
ಡೆಬಿಟ್ ಕಾರ್ಡ್ಗೆ ಶುಲ್ಕ ಇಲ್ಲ: ಇದೇ ವೇಳೆ, ಗ್ರಾಹಕರು ಸರಕುಗಳನ್ನು ಖರೀ ದಿಸಿ, ಡೆಬಿಟ್ ಕಾರ್ಡ್ ಬಳಸಿ ಪಾವತಿಸಿದರೆ ಅದರ ಮೇಲೆ ಯಾ ವುದೇ ಹೆಚ್ಚುವರಿ ಶುಲ್ಕ ವಿಧಿಸಬಾರದು ಎಂದೂ ‘ಆರ್ಬಿಐ’ ಸ್ಪಷ್ಟ ಸೂಚನೆ ನೀಡಿದೆ. ಈ ರೀತಿಯ ಯೋಜನೆಗಳಿರುವುದು ಗ್ರಾಹಕರನ್ನು ಆಕರ್ಷಿಸಲು ಮಾತ್ರ. ಈ ಮೂಲಕ ಹೆಚ್ಚು ಹೆಚ್ಚು ಸರಕುಗಳನ್ನು ಖರೀದಿಸುವಂತೆ ಉತ್ತೇಜಿಸಲಾಗುತ್ತದೆ. ನಂತರ ಸರಕುಗಳು ಮತ್ತು ಮರು ಪಾವತಿ ಅವಧಿ ಆಧರಿಸಿ ಬಡ್ಡಿ ದರ ಮತ್ತು ವಹಿವಾಟು ಪ್ರಕ್ರಿಯೆ ಶುಲ್ಕ ಹೇರಲಾಗುತ್ತದೆ ಎಂದೂ ‘ಆರ್ಬಿಐ’ ಹೇಳಿದೆ.
ಶೂನ್ಯ ಬಡ್ಡಿದರ ಕ್ರಮ ಅನುಸರಿ ಸುವ ಬದಲು ಬ್ಯಾಂಕುಗಳು, ಸರಕುಗಳಿಗೆ ಮಾರಾಟಗಾರರು ನೀಡುವ ರಿಯಾಯ್ತಿ ಆಧರಿಸಿ ಸಾಲ ನೀಡಬೇಕು. ಎಂದೂ ‘ಆರ್ಬಿಐ’ ಸಲಹೆ ಮಾಡಿದೆ. ಹಬ್ಬಗಳ ವೇಳೆ ಸಾಲ ಮಾಡಿಯಾದರೂ ಮನೆಗೆ ಹೊಸಪರಿ ಕರಗಳನ್ನು ಖರೀದಿಸಬೇಕು ಎಂದು ಕೊಂಡಿದ್ದವರಿಗೆ ಆರ್ಬಿಐ ನಿರ್ಧಾರದಿಂದ ನಿರಾಸೆ ಕಾದಿದೆ.
ಶೂನ್ಯ ಬಡ್ಡಿದರ ಕ್ರಮ ಅನುಸರಿಸುವ ಬದಲು ಬ್ಯಾಂಕುಗಳು, ಸರಕುಗಳಿಗೆ ಮಾರಾಟಗಾರರು ನೀಡುವ ರಿಯಾಯ್ತಿ ಆಧರಿಸಿ ಸಾಲ ನೀಡಬೇಕು ಎಂದೂ ‘ಆರ್ಬಿಐ’ ಸಲಹೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.