`ನನ್ನ ಕಾಲು
ನೆಲದ ಮೇಲೆ ಇರುವಂತೆ
ನೋಡಿಕೊಳ್ಳುತ್ತೇನೆ~
(ಪ್ರ ವಾ ಸೆ.13);
ಅಂಗೋಲಾದ ಕಪ್ಪುಸುಂದರಿ
ಉಲಿದಿದ್ದಾಳೆ ಆನಂದಬಾಷ್ಪದ ನಡುವೆ;
ಹಾರೈಸೋಣ ಹಾಗೇಯೇ
ಆಗಲಿ ಎಂದು
ವಿಶ್ವಸುಂದರಿಯೆಂದು ಎದೆ ಉಬ್ಬಿಸಿಕೊಂಡು
ಇಡದಿರಲಿ ಆಕೆ ಯಾರ ತಲೆಯ
ಮೇಲೂ ತನ್ನ ಕಾಲನ್ನ;
ಧರೆಯ ಮೇಲಿನ ಚೆಂದುಳ್ಳಿ ಶ್ಯಾಮಲೆಗೆ
ಬಾರದಿರಲಿ ಬೆಡಗು ಬಿನ್ನಾಣ
ಮುಪ್ಪು ಕಾಡುವ ಮುನ್ನ...!
-ಎಲ್.ಎಚ್.ಅರುಣಕುಮಾರ್, ದಾವಣಗೆರೆ