ಮಂಡ್ಯ: ಉತ್ತಮ ಬದುಕು ರೂಪಿಸಲು ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಭಕ್ತಿಯಿಂದ ವಿದ್ಯಾರ್ಜನೆ ಮಾಡಬೇಕೆಂದು ಆದಿಚುಂಚನಗಿರಿ ಕ್ಷೇತ್ರದ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿ ಕರೆ ನೀಡಿದರು.
ಶನಿವಾರ ತಾಲ್ಲೂಕಿನ ಕೊಮ್ಮೇಹಳ್ಳಿಯಲ್ಲಿನ ಶಾಖಾ ಮಠದಲ್ಲಿ ನಡೆದ ಬಿಜಿಎಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಉತ್ತಮ ಶಿಕ್ಷಣ ಮಾತ್ರವೇ ಉತ್ತಮ ಬದುಕು ಕೊಡಬಲ್ಲದು. ವಿದ್ಯಾರ್ಥಿಗಳು ಮಠದಲ್ಲಿ ದೊರೆಯುತ್ತಿರುವ ಸೌಲಭ್ಯವನ್ನು ಪಡೆದುಕೊಂಡು ವಿದ್ಯಾವಂತರಾಗಬೇಕು ಎಂದರು.
ಮಠದವು ಬೆಳೆದು ಬಂದ ಹಾದಿಯನ್ನು ಸ್ಮರಿಸಿದ ಅವರು, ಕೊಮ್ಮೇರಹಳ್ಳೀ ಶಾಖಾ ಮಠದ ಬೆಳವಣಿಗೆಗೆ ಶಾಖಾ ಮಠದ ಹಿಂದಿನ ಸ್ವಾಮೀಜಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಆಭಿನವ ಭಾರತಿ ವಿದ್ಯಾ ಸಂಸ್ಥೆಯ ಅನಂತಕುಮಾರ ಸ್ವಾಮಿಜಿ, ನಗರಸಭಾಧ್ಯಕ್ಷ ಎಂ.ಪಿ.ಅರುಣ್ಕುಮಾರ್,ಅಧಿಕಾರಿಗಳು ಹಾಜರಿದ್ದರು.