ಹುಬ್ಬಳ್ಳಿ: ಮೈಸೂರು ರಾಜಮನೆತನದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಹಿನ್ನೆಲೆಯಲ್ಲಿ ಅವಳಿ ನಗರದ ವಿವಿಧ ಸಂಘ–ಸಂಸ್ಥೆಗಳು, ಸಂಘಟನೆಗಳು ಹಾಗೂ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ಒಡೆಯರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ: ಮಂಗಳವಾರ ಸಭೆ ಸೇರಿ ಸಂತಾಪ ವ್ಯಕ್ತಪಡಿಸಲಾಯಿತು. ಸಭೆಯಲ್ಲಿ ಯುವ ಮೋರ್ಚಾ ಅಧ್ಯಕ್ಷ ರಾಜು ವಿ.ಜರತಾರಘರ, ಬಿಜೆಪಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಛಬ್ಬಿ, ಮುಖಂಡರಾದ ಚಂದ್ರು ಗಾಯಕವಾಡ, ಜಗದೀಶ ಕಂಬಳಿ, ಮೋಹನಲಾಲ ಜೈನ, ರಂಗಾ ಕಠಾರೆ, ಮಲ್ಲಿಕಾರ್ಜುನ ಮರಿಗೌಡ್ರ, ಹನುಮಂತ ದೊಡ್ಡಮನಿ ಪಾಲ್ಗೊಂಡಿದ್ದರು.
ವ್ಯಾಪಾರಸ್ಥರ ಸಂಘ: ಒಡೆಯರ್ ನಿಧನದಿಂದ ರಾಜ್ಯ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ತಿಳಿಸಿದ್ದಾರೆ. ಪಂಚಮಸಾಲಿ ಸಮಾಜ ಶಹರ ಘಟಕ: ಮಂಗಳವಾರ ಸಂಜೆ ಅಯೋಧ್ಯಾನಗರದ ಗಾಂಧಿ ಭವನದಲ್ಲಿ ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಟ್ರಸ್ಟ್ ವತಿಯಿಂದ ಸಂತಾಪ ಸಭೆ ನಡೆಸಲಾಯಿತು.
ಸಮಾಜದ ಮುಖಂಡರಾದ ನೀಲಕಂಠ ಅಸೂಟಿ, ಶಿವಾನಂದ ಬೆಲ್ಲದ, ರಾಜಶೇಖರ ಮೆಣಸಿನಕಾಯಿ, ಕಲ್ಲಪ್ಪ ಯಲಿವಾಳ, ಗಿರೀಶ ಸುಂಕದ, ಕುಮಾರ ಕುಂದನಹಳ್ಳಿ, ಬಸವರಾಜ ಕಿತ್ತೂರ,ಮಹೇಶ ಕಂಬಾರ, ರವಿ ಹೊಸೂರ, ಓಂ ಸಂಗಮೇಶ ಹಾಜರಿದ್ದರು