ಶ್ರೀನಗರ: ಹಿಮ ಕುಸಿತದಲ್ಲಿದಡಿ ಸಿಲುಕಿ ಇಬ್ಬರು ಯುವತಿಯರು ಸಾವನ್ನಪ್ಪಿದ ಘಟನೆ ಉತ್ತರ ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುರೆಜ್ ಎಂಬಲ್ಲಿ ಭಾನುವಾರ ನಡೆದಿದೆ.
ಪಿಟಿಐ ವರದಿ: ಅಧಿಕ ಹಿಮಪಾತದಿಂದಾಗಿ ಜಮ್ಮು – ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. 300 ಕಿ.ಮೀ ಉದ್ದದ ಈ ಮಾರ್ಗವು ಜಮ್ಮು ಕಾಶ್ಮೀರದೊಂದಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾಗಿದೆ. ಅಧಿಕ ಹಿಮಪಾತದಿಂದಾಗುವ ಅಪಾಯವನ್ನು ಮನಗಂಡು ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.
ಮಂಜು: ಜನಜೀವನ ಅಸ್ತವ್ಯಸ್ತ
ಜೈಪುರ (ಪಿಟಿಐ): ರಾಜಸ್ತಾನದ ಬಹುತೇಕ ಭಾಗಗಳಲ್ಲಿ ಭಾನುವಾರ ಸತತ ಎರಡನೇ ದಿನವೂ ದಟ್ಟ ಮಂಜು ಮುಸುಕಿದ ವಾತಾವರಣ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸಾರಿಗೆ ಮತ್ತು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಯಿತು.
ಮನಾಲಿಯಲ್ಲಿ ಹಿಮಪಾತ
ಶಿಮ್ಲಾ (ಐಎಎನ್ಎಸ್): ಭಾರತದ ಜನಪ್ರಿಯ ಪ್ರವಾಸಿ ತಾಣಗಳಾದ ಶಿಮ್ಲಾ, ಮನಾಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ಈ ಋತುವಿನ ಮೊದಲ ಹಿಮಪಾತವಾಗಿದೆ. ಮನಾಲಿಯಲ್ಲಿ ಕನಿಷ್ಠ ತಾಪಮಾನ- ಮೈನಸ್ 1.2 ಡಿಗ್ರಿ ಇತ್ತು.
ಯಾಗಿದ್ದು, 18 ಸೆ.ಮೀ. ಹಿಮಪಾತವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.