ಮುಂಬೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ರವಿಶಾಸ್ತ್ರಿ ಅವರು ಬಿಸಿಸಿಐನ ‘ಅಧಿಕಾರರಹಿತ ಅಧ್ಯಕ್ಷ’ ಎನ್. ಶ್ರೀನಿವಾಸನ್ ಬೆಂಬಲಕ್ಕೆ ನಿಂತಿದ್ದಾರೆ.
‘ನಾನು ಶ್ರೀನಿವಾಸನ್ ಅವರ ಸ್ಥಾನದಲ್ಲಿದ್ದರೆ ರಾಜಿೀನಾಮೆಯನ್ನೇ ನೀಡುತ್ತಿರಲಿಲ್ಲ’ ಎಂದು ವೀಕ್ಷಕ ವಿವರಣೆಗಾರರಾಗಿರುವ ಅವರು ಹೇಳಿದರು.
‘ಶ್ರೀನಿವಾಸನ್ ಸ್ಥಾನದಲ್ಲಿದ್ದರೆ (ಬಿಸಿಸಿಐ ಅಧ್ಯಕ್ಷ) ನೀವು ಏನು ಮಾಡುತ್ತಿದ್ದೀರಿ ಎಂದು ಹಲವು ಮಂದಿ ನನ್ನಲ್ಲಿ ಕೇಳಿದ್ದಾರೆ. ನಾನು ಕೂಡಾ ರಾಜೀನಾಮೆ ನೀಡುತ್ತಿರಲಿಲ್ಲ’ ಎಂದು ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಿಳಿಸಿದರು.
‘ಅಧಿಕಾರದಿಂದ ದೂರ ಸರಿಯುವ ಮೂಲಕ ಶ್ರೀನಿವಾಸನ್ ಅವರು ವ್ಯವಸ್ಥೆಯನ್ನು ಸರಿಪಡಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.
ಶ್ರೀನಿವಾಸನ್ ‘ಒಬ್ಬ ಉತ್ತಮ ಆಡಳಿತಗಾರ’ ಎಂದು ಬಣ್ಣಿಸಿದ ರವಿಶಾಸ್ತ್ರಿ, ‘ಅವರೊಬ್ಬ ನಿಜ-ವಾದ ಕ್ರೀಡಾ ಹಾಗೂ ಕ್ರಿಕೆಟ್ ಪ್ರೇಮಿ. ಬಿಸಿಸಿಐಗೆ ಸಾಕಷ್ಟು ಕೊಡುಗೆ ಸಲ್ಲಿಸಿದ್ದಾರೆ’ ಎಂದರು.