ಶ್ರೀರಂಗಪಟ್ಟಣ: ವಿಧಾನಸಭೆ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಸಲ್ಲಿಕೆಯಾಗಿದ್ದ 27 ನಾಮಪತ್ರಗಳ ಪೈಕಿ 2 ನಾಮಪತ್ರಗಳು ತಿರಸ್ಕೃತಗೊಂಡಿವೆ.
ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಸಲ್ಲಿಸಿದ್ದ 4 ನಾಮಪತ್ರಗಳ ಪೈಕಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸಲ್ಲಿಸಿದ್ದ 2 ನಾಮಪತ್ರಗಳು ತಿರಸ್ಕೃತಗೊಂಡಿವೆ. ರವೀಂದ್ರ ಶ್ರೀಕಂಠಯ್ಯ ನಾಮಪತ್ರಗಳ ಜತೆಗೆ ಕಾಂಗ್ರೆಸ್ ಪಕ್ಷದ ಎ ಮತ್ತು ಬಿ ಫಾರಂಗಳನ್ನು ನೀಡಿಲ್ಲದ ಕಾರಣ ಎರಡು ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. ಅವರು ಪಕ್ಷೇತರ ಅಭ್ಯಥಿಯಾಗಿ ಸಲ್ಲಿಸಿದ್ದ 2 ನಾಮಪತ್ರಗಳು ಊರ್ಜಿತವಾಗಿವೆ ಎಂದು ಚುನಾವಣಾಧಿಕಾರಿ ತಬಸ್ಸುಮ್ ಜಹೇರಾ ತಿಳಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ, ಶಾಸಕ ರಮೇಶ ಬಂಡಿಸಿದ್ದೇಗೌಡ 4 ನಾಮಪತ್ರ ಸಲ್ಲಿಸಿದ್ದು, ಜೆಡಿಎಸ್ ಬಿ ಫಾರಂ ಸಹಿತ ಸಲ್ಲಿಸಿದ್ದ ನಾಮಪತ್ರ ಸಿಂಧುವಾಗಿದೆ. ಉಳಿದ ಮೂರು ನಾಮಪತ್ರಗಳನ್ನು ವಜಾ ಮಾಡಲಾಗಿದೆ. ಒಟ್ಟು 27 ನಾಮಪತ್ರಗಳಲ್ಲಿ 6 ನಾಮಪತ್ರಗಳು ವಜಾಗೊಂಡಿವೆ. ಏ.17ರ ವರೆಗೆ 19 ಮಂದಿ ನಾಮಪತ್ರ ಸಲ್ಲಿಸಿದ್ದು, ಎಲ್ಲ ಅಭ್ಯರ್ಥಿಗಳ ಒಂದೊಂದು ನಾಮಪತ್ರಗಳು ಊರ್ಜಿತವಾಗಿವೆ.