ಸಂಜೆ ವೇಳೆ ಬೈಕ್ ಹಾಗೂ ಸೈಕಲ್ಗಳಲ್ಲಿ ಸಂಚರಿಸುವವರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಜಮೀನುಗಳಿಗೆ ಹೋಗುವ ರೈತರಿಗೂ ತೊಂದರೆಯಾಗಿದೆ. ಹಾಗಾಗಿ ಈ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು. ತಡ ಮಾಡಿದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಪುಟ್ಟೇಗೌಡ, ಪ್ರಧಾನ ಕಾರ್ಯದರ್ಶಿ ಟಿ.ಎಂ. ಹೊಸೂರು ಮಹೇಶ್ ಇತರರು ಎಚ್ಚರಿಸಿದರು. ಎನ್.ಗಂಗಾಧರ್, ಶೀಲಾ ನಂಜುಂಡಯ್ಯ, ಮಹದೇವಪುರ ವಿನಯಕುಮಾರ್, ಮಹದೇವಸ್ವಾಮಿ, ಪೈ.ಹನುಮಂತು, ನಾಗರಾಜು, ಶಿವಕುಮಾರ್ ಇದ್ದರು.