ಬೆಂಗಳೂರು: ಸಾವಯವ ಬ್ರಾಂಡ್ ~24ಲೆಟರ್ ಮಂತ್ರಾ~ ಉತ್ಪನ್ನಗಳ ಪ್ರವರ್ತಕ ಸಂಸ್ಥೆಯಾಗಿರುವ `ಶ್ರೇಷ್ಠಾ ನ್ಯಾಚುರಲ್ ಬಯೊಪ್ರೊಡಕ್ಟ್ಸ್~, ಹಮ್ಮಿಕೊಂಡಿದ್ದ `ಕೀಟನಾಶಕಗಳಿಂದ ವಿಮೋಚನೆ~ ಪ್ರಚಾರ ಆಂದೋಲನ ಈಗ ಅಂತ್ಯಗೊಂಡಿದೆ.
ಗ್ರಾಹಕರು ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಬಳಸುವ ಬದಲಿಗೆ ಸಾವಯವ ಉತ್ಪನ ಬಳಸುವುದರತ್ತ ಗಮನ ಕೇಂದ್ರೀಕರಿಸುವಲ್ಲಿ ಈ ಪ್ರಚಾರ ಆಂದೋಲನವು ದೇಶದಾದ್ಯಂತ ಹಲವಾರು ನಗರಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. 7 ನಗರಗಳಲ್ಲಿ 10 ಸಾವಿರಕ್ಕಿಂತ ಹೆಚ್ಚು ಗ್ರಾಹಕರು ಈ ಉಪಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.