ವಾಷಿಂಗ್ಟನ್ (ಪಿಟಿಐ): ಶ್ವೇತಭವನದ ಆವರಣದೊಳಗೆ ಪಟಾಕಿ ಎಸೆದ ಮಧ್ಯವಯಸ್ಕ ವ್ಯಕ್ತಿಯನ್ನು ಬಂಧಿಸಲಾಗಿದೆ.
ನೌಕಾಪಡೆ ಹಡಗುಕಟ್ಟೆಯಲ್ಲಿ ಗುಂಡಿನ ದಾಳಿ ನಡೆದ ಕೆಲವೇ ತಾಸುಗಳಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಟಾಕಿ ಸದ್ದಿಗೆ ಆತಂಕಗೊಂಡ ಪತ್ರಕರ್ತರು ಯಾರೋ ಸ್ಫೋಟ ನಡೆಸಿದರೆಂದು ಭಯಪಟ್ಟರು.
‘ಶ್ವೇತಭವನದ ಉತ್ತರ ದ್ವಾರದ ಕಡೆಯಿಂದ ಎರಡು ಬಾರಿ ದೊಡ್ಡ ಸದ್ದು ಕೇಳಿಸಿತು’ ಎಂದು ಜೊನಾಥನ್ ಕರ್ಲ್ ಟ್ವೀಟ್ ಮಾಡಿದ್ದಾರೆ.