ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಟ ನೋಡಿ ಸಂತಸ ಪಡೆಯುವುದು ಅಧರ್ಮ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಜಕೀಯ ಸಂಸ್ಕೃತಿ ಎಂದರೆ ಕೇವಲ ಮಾನವೀಯತೆಯ ವಿರುದ್ಧ ನಡೆಯುವುದೇ? ಒಂದು ವೇಳೆ ರಾಜಕೀಯ ವ್ಯಕ್ತಿ ಸಂಕಟದಲ್ಲಿ ಸಿಕ್ಕಿ ಬಿದ್ದಾಗ, ಮಾನವೀಯತೆಯನ್ನು ತ್ಯಜಿಸಿ ಸಂತೋಷ ಪಡುವುದು, ಕುಣಿದಾಡುವುದು, ಲಾಡು ಹಂಚುವುದು ಸರಿಯೇ?
ಪ್ರವಾದಿ ಮಹ್ಮದ್‌ರವರು ಮಾನವ ಕೋಟಿಗೆ ಒಂದು ಸಂದೇಶ ಕೊಟ್ಟಿದ್ದಾರೆ.  `ನಿಮ್ಮ ಸಹೋದರನ ಸಂಕಟಕಾಲದಲ್ಲಿ ಸಂತೋಷ ಪಡಬೇಡಿ. ದೇವರು ಇದನ್ನು ಒಪ್ಪುವುದಿಲ್ಲ. ದೇವರು ಸಂಕಟದಲ್ಲಿರುವ ವ್ಯಕ್ತಿಗೆ ಅನುಕಂಪ ತೋರಿಸಬಹುದು ಮತ್ತು ನಿಮ್ಮನ್ನು ಸಂಕಟದಲ್ಲಿ ಸಿಕ್ಕಿಸಬಹುದು.~ ಈ ಸಂದೇಶವನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ನಡೆಯಬೇಕು.

ಮದರ್ ತೆರೇಸಾರವರು ಒಂದು ಮಾತು ಹೇಳಿದ್ದಾರೆ,  `ನೀವು ನಿಮ್ಮ ಸಹೋದರನ ಸಂತೋಷದಲ್ಲಿ ಭಾಗಿಯಾದರೆ ಅವರ ಸಂತೋಷ ಇನ್ನೂ ಹೆಚ್ಚಾಗುವುದು. ಹಾಗೆಯೇ ಅವರ ಕಷ್ಟದಲ್ಲಿ ಭಾಗಿಯಾದರೆ ಅವರ ನೋವಿನಲ್ಲೂ ಭಾಗಿಯಾದರೆ, ಅವರ ಕಷ್ಟ ಮತ್ತು ನೋವು ಕಮ್ಮಿಯಾಗುವುದು.~

ಹಿಂದು ಧರ್ಮ ಶಾಸ್ತ್ರಗಳಲ್ಲೂ ಈ ಮಾತು ಕಂಡು ಬರುವುದು. ಮಾನವೀಯತೆಗೆ ಮಾನ್ಯತೆ ಸಿಗುವುದು.

ಇಂದಿನ ನಮ್ಮ ರಾಜಕಾರಣಿಗಳು ಈ ಧರ್ಮಶಾಸ್ತ್ರಗಳ ಕಡೆ ಗಮನ ಕೊಡಬೇಕು. ಅಧಿಕಾರದ ಗರ್ವ, ದರ್ಪ ಅವರಿಗೆ ಒಳ್ಳೆಯದನ್ನು ಮಾಡುವುದಿಲ್ಲ. ತಮ್ಮ ವಿರೋಧಿಗಳ ಕಷ್ಟ, ನೋವು ತಮಗೂ ಒಂದು ದಿವಸ ಬರಬಹುದೆಂಬ ಭೀತಿ ಹೃದಯದಲ್ಲಿ ನಾಟಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT