ಟ್ಯಾಂಕರ್ ಮುಷ್ಕರ ಅಂತ್ಯ
ಚೆನ್ನೈ: ಸರ್ಕಾರದ ಪ್ರತಿನಿಧಿಗಳು ಮತ್ತು ಟ್ಯಾಂಕರ್ ಮಾಲೀಕರ ಸಂಘದ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಏಳು ದಿನಗಳಿಂದ ನಡೆಯುತ್ತಿದ್ದ ಅಡುಗೆ ಅನಿಲ ಸಾಗಾಟ ಟ್ಯಾಂಕರ್ಗಳ ಮುಷ್ಕರವನ್ನು ತಕ್ಷಣದಿಂದಲೇ ಹಿಂದಕ್ಕೆ ಪಡೆಯಲಾಗಿದೆ. ಇದರಿಂದ ಅಡುಗೆ ಅನಿಲ ತೊಂದರೆ ಅನುಭವಿಸುತ್ತಿದ್ದವರು ಸಮಾಧಾನ ಪಡುವಂತಾಗಿದೆ.
ಆಂಧ್ರ: `ಪ್ರಜಾ ರಾಜ್ಯಂ~ನ ಇಬ್ಬರಿಗೆ ಸಚಿವ ಪಟ್ಟ
ಹೈದರಾಬಾದ್ (ಐಎಎನ್ಎಸ್): ಆಂಧ್ರಪ್ರದೇಶ ಸಚಿವ ಸಂಪುಟವನ್ನು ವಿಸ್ತರಿಸಲಾಗಿದ್ದು ನಟ ಚಿರಂಜೀವಿ ನೇತೃತ್ವದ ಪ್ರಜಾ ರಾಜ್ಯಂ ಪಕ್ಷಕ್ಕೆ ಸೇರಿದ ಇಬ್ಬರು ಶಾಸಕರನ್ನು ಸಚಿವರಾಗಿ ನೇಮಿಸಲಾಗಿದೆ. ಪ್ರಜಾರಾಜ್ಯಂ ಕಳೆದ ವರ್ಷ ಕಾಂಗ್ರೆಸ್ನೊಂದಿಗೆ ವಿಲೀನಗೊಂಡಿತ್ತು.
ಗುಂಡಿನ ಕಾಳಗ: ಉಗ್ರನ ಸಾವು
ಪೂಂಚ್ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುರುವಾರ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಉಗ್ರನೊಬ್ಬ ಮೃತಪಟ್ಟಿದ್ದಾನೆ.
ಮಾವೊವಾದಿಗಳಿಂದ ಆದಿವಾಸಿ ಹತ್ಯೆ
ಮಲ್ಕನ್ಗಿರಿ (ಪಿಟಿಐ): ಒಡಿಶಾದ ಮಲ್ಕನ್ಗಿರಿ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಮಾವೊವಾದಿಗಳು ಆದಿವಾಸಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.
ಮಲ್ಕನ್ಗಿರಿಯಿಂದ 90 ಕಿ.ಮೀ. ದೂರದಲ್ಲಿರುವ ತಂಕಮುನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುರು ಕಿಲಾ ಎಂಬಾತದ ಕೊರಳು ಸಿಗಿದು ಕೊಂದು ಹಾಕಿರುವ ಮಾವೋವಾದಿಗಳು ಆತನ ಶವವನ್ನು ಗ್ರಾಮದ ಬಳಿ ಎಸೆದು ಹೋಗಿದ್ದಾರೆ.