ಮುಂಬೈ:`ಕಲೆ ಕರಗತಗೊಳ್ಳಲು ಕುಟುಂಬದ ಹಿಂದಿನ ಪರಂಪರೆ ಅಗತ್ಯ~ ಎಂದು ಸಂಶೋಧಕ ಡಾ.ಎ.ವಿ. ಪ್ರಸನ್ನ ಅವರು ಇಲ್ಲಿನ ಕರ್ನಾಟಕ ಸಂಘದ ಸಭಾ ಭವನದಲ್ಲಿ ವಿದುಷಿ ಶ್ಯಾಮಲಾ ಪ್ರಕಾಶ್ ಅವರ ಚೊಚ್ಚಲ ಕೃತಿ `ನಾದೋಪಾಸನ~ ಅಂಕಣ ಬರಹ ಲೋಕಾರ್ಪಣೆ ಮಾಡಿ ಹೇಳಿದರು.
ಶ್ಯಾಮಲಾ ಅವರು ಸಂಗೀತಕಾರರ ಜೀವನದ ಬಗ್ಗೆ ಅರಿತು ಬರೆದ ಅಂಕಣ ಬರಹಗಳನ್ನು ಒಳಗೊಂಡ ಕೃತಿಯನ್ನು ಮತ್ತು ಅವರ ಸಾಧನೆಯನ್ನು ಶ್ಲಾಘಿಸಿದರು.
`ದೊಡ್ಡ ಸಂಸ್ಕೃತಿ ಸಣ್ಣ ಸಂಸ್ಕೃತಿಯನ್ನು ನುಂಗಿ ಹಾಕುತ್ತದೆಯೋ ಎಂಬಂತೆ ಹಿಂದೂಸ್ತಾನಿ ಪರಂಪರೆಯಲ್ಲಿ ಕರ್ನಾಟಕ ಸಂಗೀತ ಮರೆಯಾಗುತ್ತಿದೆ ಎನ್ನುವ ಆತಂಕ ಕಾಡುತ್ತಿದೆ ~ ಎಂದು ಹೇಳಿದರು.
ಸಂಗೀತವನ್ನು ಮೈಗೂಡಿಸಲು ಅಪಾರವಾದ ಆಸಕ್ತಿ ಬೇಕು. ಮುಖ್ಯವಾಗಿ ಇನ್ನೊಬ್ಬರ ಸಂಗೀತವನ್ನು ಕೇಳುವ ಆಸಕ್ತಿ ಇರಬೇಕು. ಇದರಿಂದ ಸಂಗೀತ ಕೇಳುವ ಜತೆಗೆ ತಾವು ಮಾಡಿದ ತಪ್ಪು ತಿದ್ದಲು ಸಾಧ್ಯ ಎಂದು ಮೈಸೂರು ಅಸೋಸಿಯೇಶನ್ ಕೆ.ಮಂಜುನಾಥಯ್ಯ ಅವರು ಹೇಳಿದರು.