ಕಾರಣ ಸಂಗೀತಗಾರರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಕರೆ ನೀಡಿದರು.
ಇಲ್ಲಿಯ ಸೂಗೂರೇಶ್ವರ ಜಾತ್ರಾ ಮಹೊೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತ ಕಿವಿಗೆ ಇಂಪು ನೀಡುವ ಮೂಲಕ ಮನಸ್ಸಿಗೂ ಅನಂದ ನೀಡುತ್ತದೆ. ಮನಸ್ಸಿಗೆ ದುಃಖವಾದಾಗ ಬೇಸರವಾದಾಗ ಸಂಗೀತ ಕೇಳುವುದರಿಂದ ಮನಸ್ಸು ಆಹ್ಲಾದಗೊಳ್ಳುತ್ತದೆ. ಅಷ್ಟೇ ಅಲ್ಲದೆ ದುಃಖ ಮರೆಸುವ ಶಕ್ತಿ ಹೊಂದಿದೆ. ಕಲೆ ಸಾಹಿತ್ಯ, ಸಂಗೀತಕ್ಕೆ ಸುರಪುರ ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು.
ತಾಳಿಕೋಟೆಯ ಸಂಗೀತ ಶಾಲಾ ಶಿಕ್ಷಕ ಎ.ಎಸ್.ವಠಾರ ಮಾತನಾಡಿ, ಸಂಗೀತಕ್ಕೆ ಯಾವುದೇ ಜಾತಿ ಧರ್ಮ ಮೇಲು ಕೀಳುಗಳೆಂಬ ಭೇದಭಾವವಿಲ್ಲ. ಕಲೆ ಯಾವುದೇ ಒಂದು ವರ್ಗಕ್ಕೆ ಸೀಮಿತವಾದುದಲ್ಲ. ಪರಸ್ಪರ ಐಕ್ಯತೆಯನ್ನು ಬೆಸೆಯುವಲ್ಲಿ ಸಂಗೀತ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಸದಸ್ಯರಾದ ಮಾನಪ್ಪ ಚಳ್ಳಿಗಿಡ, ಜ್ಯೋತಿ ದೊಡ್ಡಮನಿ ಇದ್ದರು. ಆಕಾಶವಾಣಿ ಕಲಾವಿದ ಬಸವರಾಜ ಭಂಟನೂರ, ಶಿವಶರಣಯ್ಯಸ್ವಾಮಿ ಬಳ್ಳುಂಡಗಿಮಠ, ಮಲ್ಲಿಕಾರ್ಜುನ ಭಜಂತ್ರಿ, ಶರಣಕುಮಾರ ಜಾಲಹಳ್ಳಿ, ಮಂಜುಳಾ ದಾಂಡೇಲಿ, ಜಟ್ಟೆಪ್ಪ ಭದ್ರಾವತಿ, ಸಿದ್ದಲಿಂಗಯ್ಯ ಸ್ವಾಮಿ, ಸಿದ್ದಣ್ಣ ದೇಸಾಯಿ, ದೇವಿಂದ್ರಕುಮಾರ ಕಕ್ಕಳಮೇಲಿ, ಮೋಹನ ಮಾಳದಕರ್, ವಿರುಪಾಕ್ಷಿ ಹೂಗಾರ, ಆಮಯ್ಯಸ್ವಾಮಿ ರಾಜನಕೋಳೂರು ಸಂಗೀತ ಸೇವೆ ನೀಡಿದರು. ಸುರೇಶ ಅಂಬೂರೆ, ರಾಜಶೇಖರ ಗೆಜ್ಜಿ, ಈಶ್ವರ ಬಡಿಗೇರ, ರಾಘವೇಂದ್ರ ಕೋಟಿಖಾನಿ, ಮಹಾಂತೇಶ ಶಹಾಪುರಕರ್ ತಬಲಾ ಸಾಥ್ ನೀಡಿದರು. ಚಂದ್ರಶೇಖರ ಆಜಾದ್ ಸ್ವಾಗತಿಸಿದರು. ಶರಣಬಸವ ಯಾಳವಾರ ನಿರೂಪಿಸಿದರು. ರಮೇಶ ಬಡಗಾ ವಂದಿಸಿದರು.