ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತಾಗೆ ಅಮೆರಿಕ ಮನೆಕೆಲಸದವರ ಬೆಂಬಲ

Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ, ಐಎಎನ್‌ಎಸ್‌): ದೇವ­ಯಾನಿ ಖೋಬ್ರಾಗಡೆ ಅವರ ಮನೆ ಕೆಲಸ ಮಾಡುತ್ತಿದ್ದ ಸಂಗೀತಾ ರಿಚರ್ಡ್‌ ಅವ­ರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾ­ಯಿಸಿ ಅಮೆರಿಕ ಮನೆ ಕೆಲಸದವರ ಸಂಘ­ಟನೆಗಳ ಸದಸ್ಯರು  ಇಲ್ಲಿನ ಭಾರ­ತೀಯ ರಾಯ­­ಭಾರ ಕಚೇರಿ ಎದುರು ಶನಿವಾರ ಮತಪ್ರದರ್ಶನ ನಡೆಸಿದರು.

ರಾಜತಾಂತ್ರಿಕ ವಿನಾಯ್ತಿ ನೆಪ­ದಲ್ಲಿ ದೇವಯಾನಿ ಅವರು ಪ್ರಕರಣದಿಂದ ತಪ್ಪಿಸಿ­ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾ­ಕಾ­ರರು, ಸಂಗೀತಾ ಅವರಿಗೆ ನ್ಯಾಯ ದೊರಕ­ಬೇಕಾ­ದರೆ ದೇವಯಾನಿ ಅವರಿಗೆ ಶಿಕ್ಷೆ­ಯಾಗಬೇಕು ಎಂದು ಆಗ್ರಹಿಸಿದರು.

ಖರ್ಷಿದ್ ಹೇಳಿಕೆಗೆ ಸ್ವಾಗತ:  ರಾಜ­ತಾಂತ್ರಿಕ ಅಧಿಕಾರಿ ದೇವಯಾನಿ ಅವರ ಬಂಧನದಿಂದ ಉಂಟಾಗಿರುವ ರಾಜ­ತಾಂತ್ರಿಕ ಬಿಕ್ಕಟ್ಟು ಭಾರತ ಮತ್ತು ಅಮೆ­ರಿಕ ಸಂಬಂಧದ ಮೇಲೆ ಪ್ರತಿಕೂಲ ಪರಿ­ಣಾಮ ಉಂಟು ಮಾಡಬಾರದೆಂಬ ವಿದೇ­ಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಅವರ ಹೇಳಿಕೆ­ಯನ್ನು ಅಮೆ­ರಿಕ ವಿದೇ­ಶಾಂಗ ಖಾತೆಯ ವಕ್ತಾರೆ ಜೆನ್‌ ಸಾಕಿ ಸ್ವಾಗತಿಸಿದ್ದಾರೆ.

ಅಮೆರಿಕ ಪುನರುಚ್ಚಾರ: ಭಾರ­­­ತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವ­ರನ್ನು ವಿಶ್ವಸಂಸ್ಥೆಗೆ ವರ್ಗಾವಣೆ ಮಾಡಿ­ದ್ದರೂ ಅವರ ವಿರು­ದ್ಧದ ವೀಸಾ ವಂಚನೆ ಪ್ರಕರಣವನ್ನು ರದ್ದು­ಪಡಿಸು­ವು­ದಿಲ್ಲ ಎಂದು ಅಮೆರಿಕ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ದೇವಯಾನಿ ವಿಶ್ವಸಂಸ್ಥೆಗೆ ವರ್ಗಾ­ವಣೆ ಆಗಿ­ರುವುದರಿಂದ ಅವರಿಗೆ ರಾಜ­ತಾಂತ್ರಿಕ ವಿನಾಯ್ತಿಯ ಸೌಲಭ್ಯ­ವಿದ್ದರೂ, ವೀಸಾ ವಂಚನೆ ಎಸಗುವಾಗ ಈ ಸೌಲಭ್ಯ ಇಲ್ಲದೆ ಇದ್ದುದರಿಂದ  ಅವರ ವಿರುದ್ಧದ ಪ್ರಕರಣ ರದ್ದುಪಡಿ­ಸಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ. ಆದರೂ ಭಾರತ ಮತ್ತು ಅಮೆರಿಕ ಈ ಸಮಸ್ಯೆಯನ್ನು ಸೌಹಾ­ರ್ದಯುತವಾಗಿ ಬಗೆಹರಿಸುವ ಮಾತ­ನಾಡುತ್ತಿವೆ.

ವಿಶ್ವಸಂಸ್ಥೆ ಪರಿಶೀಲನೆ: ದೇವ­ಯಾನಿ ಅವ­ರನ್ನು ವಿಶ್ವಸಂಸ್ಥೆಗೆ ವರ್ಗಾ­ವಣೆ ಮಾಡಿ­ರುವ ಅಧಿಸೂಚನೆ ಭಾರತ ಸರ್ಕಾರ­ದಿಂದ ಬಂದಿದ್ದು, ನಿಯಮಗಳ ಪ್ರಕಾರ ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ವಕ್ತಾರ ಫರಾನ್‌ ಹಕ್‌ ತಿಳಿಸಿದ್ದಾರೆ.

ದೇವಯಾನಿ ವಿರುದ್ಧದ ಕ್ರಿಮಿನಲ್‌ ಪ್ರಕರಣವು ವಿಶ್ವಸಂಸ್ಥೆಯ ಮಾನ್ಯತಾ ಪತ್ರ ಪಡೆಯಲು ಅಡ್ಡಿಯಾಗುವ ವಿಚಾರ ಮತ್ತು ರಾಜತಾಂತ್ರಿಕ ವಿನಾಯ್ತಿ ಸೌಲಭ್ಯದ ಬಗ್ಗೆ ತಾವು ಏನನ್ನೂ ಹೇಳು­ವುದಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತದ ಮಾಧ್ಯಮಗಳ ಟೀಕೆ: ರಾಜ­ತಾಂತ್ರಿಕ ಅಧಿಕಾರಿ ದೇವಯಾನಿ ಅವರು ಅಪರಾಧವೆಸಗಿದ್ದರೂ ಭಾರ­ತದ ಮಾಧ್ಯ­ಮ­­ಗಳು ವಾಸ್ತವಾಂಶಕ್ಕೆ ವಿರುದ್ಧ­ವಾದ ಸುದ್ದಿಗಳನ್ನು ಪ್ರಕಟಿಸು­ತ್ತಿವೆ ಎಂದು ಅಮೆರಿಕದ ಮಾಧ್ಯಮಗಳು ಟೀಕಿಸಿವೆ.

ವಾಸ್ತವಾಂಶವನ್ನು ತಿರುಚಿ ವರದಿ ಮಾಡಿರುವ ಭಾರತದ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸಿವೆ ಎಂದು ‘ನ್ಯೂಯಾರ್ಕ್‌ ಟೈಮ್ಸ್’ ಆರೋಪಿಸಿದೆ.

ಭಾರ­ತದ ಪ್ರಧಾನಿ ಮತ್ತು ಇತರ ಸಚಿ­ವರು, ದೇವಯಾನಿ ಅವರನ್ನು ಸಮ­ರ್ಥಿಸಿ­ಕೊಂಡು ಮಾತನಾಡಿರುವು­ದನ್ನು ಕೆಲವು ಅಂಕಣಕಾರರು ಟೀಕಿಸಿದ್ದಾರೆ.

ಪಾಕ್‌ ಪತ್ರಿಕೆ ಮೆಚ್ಚುಗೆ
(ಇಸ್ಲಾಮಾಬಾದ್‌ ವರದಿ): ­ಮಹಿಳಾ ರಾಜತಾಂತ್ರಿಕ ಅಧಿಕಾರಿ­ಯನ್ನು ಅಮೆ­ರಿ­ಕದ ಅಧಿಕಾರಿಗಳು ಬಂಧಿಸಿದ್ದಕ್ಕೆ ಭಾರತ ನೀಡಿದ ದಿಟ್ಟ ಪ್ರತಿಕ್ರಿಯೆ­ಯನ್ನು ನೋಡಿ ಪಾಕಿ­ಸ್ತಾನ ಪಾಠ ಕಲಿಯಬೇಕು ಎಂದು ‘ಡೈಲಿ ಟೈಮ್ಸ್’ ಹೇಳಿದೆ.

ದೇಶದ ಗೌರವಕ್ಕೆ ಧಕ್ಕೆಯಾ­ದಾಗ ಭಾರತದ ಜನತೆ ಮತ್ತು ಸರ್ಕಾರ ಕಠೋರವಾಗಿ ಪ್ರತಿಕ್ರಿಯಿ­ಸಿದ್ದು, ಪಾಕಿ­ಸ್ತಾನ ಇದನ್ನು ನೋಡಿ ಕಲಿಯಬೇಕು ಎಂದು ಪತ್ರಿಕೆ ಸಂಪಾ­ದಕೀ­ಯದಲ್ಲಿ ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT