ಮಡಿಕೇರಿ: ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೂರದೂರದಿಂದ ವಾಹನಗಳಲ್ಲಿ ಬಂದಿದ್ದ ಸಾವಿರಾರು ಜನ ಕನ್ನಡಾಭಿಮಾನಿಗಳು ಸಂಚಾರದ ಅವ್ಯವಸ್ಥೆಯಿಂದ ಶಪಿಸುವಂತಾಯಿತು. ಸಮ್ಮೇಳನದ ಮುಖ್ಯ ವೇದಿಕೆಯಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಮೈದಾನದವರೆಗೆ ಹೋಗಲು ಅವರು ಪರದಾಡುತ್ತಿದ್ದರು.
ಪ್ರತಿ ಚೌಕಿಗಳಲ್ಲಿ, ವೃತ್ತಗಳಲ್ಲಿ ಬ್ಯಾರಿಕೇಡ್ ಹಾಕಿಕೊಂಡು ನಿಂತಿದ್ದ ಸಂಚಾರಿ ಪೊಲೀಸರ ಜೊತೆ ಜಗಳವಾಡುತ್ತಿದ್ದ ದೃಶ್ಯ ಕಾಣುತ್ತಿತ್ತು. ಹಲವು ಕಡೆ ಪಾಸ್ಗಳಿದ್ದ ವಾಹನಗಳನ್ನು ಕೂಡ ತಡೆಹಿಡಿಯಲಾಗಿತ್ತು.
ಮಾತಿಗೆ ಮಾತು ಜೋರಾದಾಗ, ‘ಎಸ್.ಪಿ ಅವರಿಂದ ಹೇಳಿಸಿ’ ಎನ್ನುವ ಉಡಾಫೆಯ ಉತ್ತರವನ್ನು ಸಂಚಾರಿ ಪೇದೆಗಳು ಕೊಡುತ್ತಿದ್ದರು.
ಅತಿ ಹೆಚ್ಚು ತೊಂದರೆಗೆ ಗುರಿಯಾದವರೆಂದರೆ ಸ್ಥಳೀಯ ನಾಗರಿಕರು. ’ನಾಲ್ಕು ಅಡಿ ದೂರದಲ್ಲಿರುವ ಮನೆಗೆ ಸುತ್ತುಬಳಸಿ ಹೋಗಬೇಕಾಗಿದೆ.
ಏಕಮುಖ ಸಂಚಾರದಿಂದ ಪೆಟ್ರೋಲ್ಗೆ ಎಷ್ಟೂಂತ ಹಣ ಸುರಿಯೋದು? ನಮ್ಮ ಕಷ್ಟ ಯಾರಿಗೆ ಹೇಳಬೇಕು?’ ಎಂದು ಮಡಿಕೇರಿಯ ಗಣಪತಿ ದೂರಿದರು.