ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಎಂ.ಎಂ.ಮಹಾದೇವಯ್ಯ ಹಾಗೂ ಎಸಿಪಿ ನರೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಪಲ್ಮೊನಾಲಜಿಸ್ಟ್ ಡಾ. ಹಿರೇಣ್ಣಪ್ಪ ಅವರು ಉಪನ್ಯಾಸದಲ್ಲಿ ಪಾಲ್ಗೊಂಡ ಪೊಲೀಸರಿಗೆ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಹೇಗೆ ಅವರು ಮಾಲಿನ್ಯಕ್ಕೆ ತೆರೆದುಕೊಳ್ಳಲಿದ್ದಾರೆ, ಅದರಿಂದ ಆರೋಗ್ಯದ ಮೇಲಾಗುವ ದೀರ್ಘಕಾಲಿಕ ಪರಿಣಾಮಗಳನ್ನು ಯಾವ ಮಾರ್ಗೋಪಾಯಗಳಿಂದ ತಗ್ಗಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಡಿಯಲ್ಲಿ ಆಸ್ಪತ್ರೆಯು ಪ್ರತಿಯೊಬ್ಬ ಸಂಚಾರ ಪೊಲೀಸರಿಗೆ ತಲಾ 25ರಂತೆ 5,000 ಮುಖಗವಸುಗಳನ್ನು ನೀಡಿತು.